ADVERTISEMENT

ಡ್ರಗ್ಸ್‌ ಸಾಗಣೆ ಮಾಡಿದ್ದ ಭಾರತ ಮೂಲದ ವ್ಯಕ್ತಿಗೆ ಸಿಂಗಪುರದಲ್ಲಿ ಗಲ್ಲು

ಅಪರಾಧಿಯಾಗಿದ್ದ ಭಾರತ ಮೂಲದ ತಂಗರಾಜು ಸುಪ್ಪಯ್ಯ

ಪಿಟಿಐ
Published 25 ಏಪ್ರಿಲ್ 2023, 14:46 IST
Last Updated 25 ಏಪ್ರಿಲ್ 2023, 14:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ಮಾದಕ ವಸ್ತು ಕಳ್ಳಸಾಗಣೆ ನೀಡಿದ್ದ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಭಾರತ ಮೂಲದ ತಂಗರಾಜು ಸುಪ್ಪಯ್ಯ (46) ಅವರನ್ನು ಬುಧವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಮಂಗಳವಾರ ಮಾಧ್ಯಮ ವರದಿಯೊಂದು ತಿಳಿಸಿದೆ. 

ಒಂದು ಕೆ.ಜಿ.ಗೂ ಹೆಚ್ಚು ಪ್ರಮಾಣದ ಗಾಂಜಾವನ್ನು ಸಾಗಣೆ ಮಾಡಿದ್ದ ಆರೋಪದಡಿ ತಂಗರಾಜು ಅವರಿಗೆ 2018ರ ಅಕ್ಟೋಬರ್‌ 9ರಂದು ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.

2014 ರಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.