ADVERTISEMENT

ಸಾರ್ವಭೌಮತ್ವ ರಕ್ಷಿಸುವುದೇ ಜನರ ಬಯಕೆ: ಮುಯಿಝು

ಪಿಟಿಐ
Published 23 ಏಪ್ರಿಲ್ 2024, 15:59 IST
Last Updated 23 ಏಪ್ರಿಲ್ 2024, 15:59 IST
ಮೊಹಮದ್‌ ಮುಯಿಝು –ಪಿಟಿಐ ಚಿತ್ರ
ಮೊಹಮದ್‌ ಮುಯಿಝು –ಪಿಟಿಐ ಚಿತ್ರ   

ಮಾಲೆ: ‘ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ ರಕ್ಷಿಸುವುದೇ ಮಾಲ್ದೀವ್ಸ್‌ ನಾಗರಿಕರ ಬಯಕೆಯಾಗಿದೆ ಎನ್ನುವುದನ್ನು ಸಂಸತ್‌ ಚುನಾವಣೆಯು ಸಾಬೀತುಪಡಿಸಿದೆ’ ಎಂದು ಅಧ್ಯಕ್ಷ ಮೊಹಮದ್‌ ಮುಯಿಝು ಪ್ರತಿಪಾದಿಸಿದ್ದಾರೆ.

ಮಾಲ್ದೀವ್ಸ್‌ ಸಂಸತ್‌ ಚುನಾವಣೆಯಲ್ಲಿ ಮೊಹಮದ್‌ ಮುಯಿಝು ನೇತೃತ್ವದ ಪಕ್ಷವು ಸ್ಪಷ್ಟ ಬಹುಮತ ಪಡೆದ ಬಳಿಕ ಮಂಗಳವಾರ ನಡೆದ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಆಂತರಿಕ ವಿಷಯಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಸಂದೇಶ ನೀಡಿದರು.

‘ನಮಗೆ ಸಂಬಂಧಿಸಿದ ವಿಷಯಗಳನ್ನು ನಾವೇ ನಿರ್ಧರಿಸುತ್ತೇವೆ ಎನ್ನುವುದನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟಪಡಿಸುತ್ತಿದ್ದೇವೆ’ ಎಂದು ಮುಯಿಝು ಹೇಳಿದರು.

ADVERTISEMENT

‘ಮಾಲ್ದೀವ್ಸ್‌ ನಿಲುವು ಕುರಿತು ಅಂತರರಾಷ್ಟ್ರೀಯ ಸಮುದಾಯಕ್ಕೂ ಈಗ ಮನವರಿಕೆಯಾಗಿದೆ. ಯಾವುದೇ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಇಲ್ಲದೆಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಸಂಪೂರ್ಣ ಸ್ವಾಯತ್ತತೆ ಇರಬೇಕು ಎನ್ನುವುದನ್ನು ಮಾಲ್ದೀವ್ಸ್‌ ನಾಗರಿಕರು ಬಯಸುತ್ತಿದ್ದಾರೆ ಎನ್ನುವುದು ಈ ಚುನಾವಣೆಯ ಫಲಿತಾಂಶದಿಂದ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.