ADVERTISEMENT

ತೆಲುಗು ಕ್ರಾಂತಿಗೀತೆಯೊಂದು 'ಏನೇ ಕನ್ನಡತಿ' ಎಂದು ರೇಗಿಸಿ ಕನ್ನಡದ ಹಿರಿಮೆ ಸಾರಿತು!

​ಪ್ರಜಾವಾಣಿ ವಾರ್ತೆ
Published 5 ಮೇ 2017, 10:19 IST
Last Updated 5 ಮೇ 2017, 10:19 IST
ತೆಲುಗು ಕ್ರಾಂತಿಗೀತೆಯೊಂದು 'ಏನೇ ಕನ್ನಡತಿ' ಎಂದು ರೇಗಿಸಿ ಕನ್ನಡದ ಹಿರಿಮೆ ಸಾರಿತು!
ತೆಲುಗು ಕ್ರಾಂತಿಗೀತೆಯೊಂದು 'ಏನೇ ಕನ್ನಡತಿ' ಎಂದು ರೇಗಿಸಿ ಕನ್ನಡದ ಹಿರಿಮೆ ಸಾರಿತು!   

ವಿಷ್ಣುವರ್ಧನ್ ಅವರ 'ಅಪ್ಪಾಜಿ' ಚಿತ್ರದಲ್ಲಿನ 'ಏನೇ ಕನ್ನಡತಿ' ಹಾಡು ಅದೆಷ್ಟು ಜನಪ್ರಿಯ ಎಂದರೆ ಊರಹಬ್ಬ, ಜಾತ್ರೆ ಅದೇನೇ ಕಾರ್ಯಕ್ರಮಗಳು ಇರಲಿ ಇಂದಿಗೂ ಆರ್ಕೆಸ್ಟ್ರಾಗಳಲ್ಲಿ ಈ ಹಾಡನ್ನು ಹಾಡಲಾಗುತ್ತದೆ.

'ಅಪ್ಪಾಜಿ' ಸಿನಿಮಾದಲ್ಲಿ ನಾಯಕ ವಿಷ್ಣುವರ್ಧನ್ ಹುಡುಗಿಯನ್ನು ರೇಗಿಸುವುದರ ಜತೆಗೆ ಕನ್ನಡದ ಹಿರಿಮೆ ಸಾರುವ ಹಾಡಾಗಿತ್ತು ಅದು. 1996ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದು ಎಂ.ಎಂ.ಕೀರವಾಣಿ. ಈ ಹಾಡನ್ನು ಹಾಡಿದವರು ಎಸ್.ಪಿ ಬಾಲಸುಬ್ರಮಣ್ಯಂ.

1994ರಲ್ಲಿ ತೆರೆಕಂಡ ತೆಲುಗು ಚಿತ್ರ 'ಎರ್ರಸೈನ್ಯಂ'ನಲ್ಲಿ ಊರು ಮನದಿರ ಎಂದು ಆರಂಭವಾಗುವ ಕ್ರಾಂತಿಗೀತೆಯೊಂದಿದೆ. ಅಪ್ಪಾಜಿ ಚಿತ್ರದ ಹಾಡಿನ ಸಾಹಿತ್ಯವನ್ನು ಬದಲಿಸಿ ಹಾಡಿದರೆ 'ಎರ್ರಸೈನ್ಯಂ' ಚಿತ್ರದ ಹಾಡಾಗುತ್ತದೆ. ತೆಲುಗು ಚಿತ್ರದಲ್ಲಿ ಈ ಹಾಡನ್ನು ಎಸ್.ಪಿ. ಬಾಲಸುಬ್ರಮಣ್ಯಂ ಅವರು ಹಾಡಿದ್ದಾರೆ.

ADVERTISEMENT

ಚಿತ್ರ: ಅಪ್ಪಾಜಿ
ಹಾಡು: ಏನೇ ಕನ್ನಡತಿ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ
ಸಂಗೀತ ನಿರ್ದೇಶನ: ಎಂ.ಎಂ.ಕೀರವಾಣಿ

ಸಾಮ್ಯತೆ

ಚಿತ್ರ: ಎರ್ರಸೈನ್ಯಂ (ತೆಲುಗು)
ಹಾಡು: ಊರು ಮನದಿರ
ಗಾಯಕರು: ಎಸ್.ಪಿ ಬಾಲಸುಬ್ರಮಣ್ಯಂ

[related]

ಕನ್ನಡ ಚಿತ್ರರಂಗದಲ್ಲಿ ಪರಭಾಷೆಯಿಂದ ಸ್ಫೂರ್ತಿ ಪಡೆದ  ಹಲವಾರು ಚಿತ್ರಗೀತೆಗಳಿವೆ. ಅವುಗಳ ಬಗ್ಗೆ ಬೆಳಕು ಚೆಲ್ಲುವ ಸರಣಿ ಲೇಖನ ಮಾಲೆ ಸ್ಫೂರ್ತಿ ಸೆಲೆ. ಇಂಥಾ ಹಾಡುಗಳ ಬಗ್ಗೆ ನಿಮಗೆ ತಿಳಿದಿದ್ದರೆ ಕಾಮೆಂಟ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.