ADVERTISEMENT

ಯಾಕೆ ಆಚರಿಸಬಾರದು?

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2016, 19:30 IST
Last Updated 4 ನವೆಂಬರ್ 2016, 19:30 IST

ಟಿಪ್ಪು ಜಯಂತಿ ಆಚರಣೆಗೆ ಸಂಶೋಧಕ ಎಂ. ಚಿದಾನಂದಮೂರ್ತಿ ವಿರೋಧ (ಪ್ರ.ವಾ., ಅ. 19). ಚಿದಾನಂದಮೂರ್ತಿಯವರಿಗೆ ನನ್ನ ಪ್ರಶ್ನೆ ಇದು.

ದಲಿತ ಸಮುದಾಯದವರು ಅಂಬೇಡ್ಕರ್‌ ಜಯಂತಿ ಆಚರಿಸುತ್ತಾರೆ. ಕುರುಬ ಸಮುದಾಯದವರು ಕನಕದಾಸ ಜಯಂತಿ ಆಚರಿಸುತ್ತಾರೆ. ನಾಯಕ ಸಮುದಾಯದವರು  ವಾಲ್ಮೀಕಿ ಜಯಂತಿ ಆಚರಿಸುತ್ತಾರೆ.

ಲಿಂಗಾಯತರು  ಬಸವ ಜಯಂತಿ ಆಚರಿಸುತ್ತಾರೆ. ಒಕ್ಕಲಿಗರು  ಕೆಂಪೇಗೌಡ ಜಯಂತಿ ಆಚರಿಸುತ್ತಾರೆ. ಬೀದರ್‌ನಲ್ಲಿ ಮರಾಠರು ಛತ್ರಪತಿ ಶಿವಾಜಿ ಜಯಂತಿ  ಆಚರಣೆಗೆ ತನ್ನಿ ಎನ್ನುತ್ತಾರೆ. ಮುಸ್ಲಿಮರು  ಟಿಪ್ಪು ಜನ್ಮದಿನ ಯಾಕೆ ಆಚರಿಸಬಾರದು!
- ಬೇಂದ್ರೆ ಮಂಜುನಾಥ್‌, ಕೆ.ಟಿ. ಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.