ಮಂಗಳವಾರ, 18-1-1961
ವಸತಿ ನಿರ್ಮಾಣಕ್ಕಾಗಿ 1500 ಕೋಟಿ ರೂ.
ಬೆಂಗಳೂರು, ಜ. 17 - ಮೂರನೆಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳ ಎಲ್ಲ ಏಜೆನ್ಸಿಗಳ ಮೂಲಕ ರಾಷ್ಟ್ರದಲ್ಲಿ ವಸತಿಗಳ ನಿರ್ಮಾಣಕ್ಕಾಗಿ ಒಟ್ಟು ಸುಮಾರು 1500 ಕೋಟಿ ರೂಪಾಯಿಗಳಷ್ಟು, ಹಣ ಖರ್ಚಾಗುವ ನಿರೀಕ್ಷೆಯಿದೆಯೆಂದು ಕೇಂದ್ರ ಸರ್ಕಾರದ ಗೃಹ ನಿರ್ಮಾಣ ಸಚಿವ ಶ್ರೀ ಕೆ. ಸಿ. ರೆಡ್ಡಿಯವರು ಇಂದು ಇಲ್ಲಿ ತಿಳಿಸಿದರು.
ಸರ್ವರಿಗೂ ಸಮಾನ ಶಿಕ್ಷಣ
ನವದೆಹಲಿ, ಜ. 17 - ಜನತೆಗೆ ಸಮಾನಾವಕಾಶ ಕಲ್ಪಿಸಲು ಹಾಗೂ ಜೀವನವನ್ನು ಆಧುನೀಕರಿಸಲು ರಾಷ್ಟ್ರದಲ್ಲಿ ಸರ್ವರಿಗೂ ವಿದ್ಯಾಭ್ಯಾಸ ಸಿಕ್ಕುವಂತಾಗುವುದು ಅತ್ಯಗತ್ಯವೆಂದು ಪ್ರಧಾನ ಮಂತ್ರಿ ನೆಹರೂ ಇಂದು ಇಲ್ಲಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.