* ಬೆಂಗಳೂರು ದಕ್ಷಿಣ ಜಿಎಸ್ಟಿ ಕಮಿಷನ ರೇಟ್ನ ಕೇಂದ್ರೀಯ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆಯ ಸೂಪರಿಂಟೆಂಡೆಂಟ್ ಆಗಿ 2018–19ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾಗಿದ್ದೀರಿ. ಈ ಪ್ರಶಸ್ತಿಗೆ ಮಾನದಂಡವೇನು?
ಸೆಂಟ್ರಲ್ ಎಕ್ಸೈಸ್, ಸೇವಾ ತೆರಿಗೆ, ಕಸ್ಟಮ್ಸ್ ಮತ್ತು ಜಿಎಸ್ಟಿಯಲ್ಲಿನ ನನ್ನ ಸೇವಾ ದಕ್ಷತೆ ಪರಿಗಣಿಸಲಾಗಿದೆ.
* ಆಯ್ಕೆ ಪ್ರಕ್ರಿಯೆ ಹೇಗೆ?
ಅದೊಂದು ಕಠಿಣ ಪ್ರಕ್ರಿಯೆ. ಸೇವಾ ದಾಖಲೆ ಪುಸ್ತಕದಲ್ಲಿ 10 ವರ್ಷಗಳವರೆಗೆ ನಿರಂತರವಾಗಿ ಅತ್ಯುತ್ತಮ ಸೇವೆ ದಾಖಲಾಗಿರುವುದು ಮೊದಲ ಅರ್ಹತೆ. ರಾಷ್ಟ್ರೀಯ ಮಟ್ಟದ ಸ್ಕ್ರೀನಿಂಗ್ ಕಮಿಟಿಯಲ್ಲಿ ಅಂತಿಮ ಆಯ್ಕೆಯಾಗಿದೆ.
* ಮಾಹಿತಿ ಹೇಗೆ ಕಲೆ ಹಾಕುವಿರಿ?
ಮಾಹಿತಿದಾರರ ಅವಲಂಬನೆ, ತಂತ್ರಜ್ಞಾನದ ನೆರವು, ದತ್ತಾಂಶ ವಿಶ್ಲೇಷಣೆ ಮಾಡಿ ತೆರಿಗೆ ವಂಚಕರನ್ನು ಪತ್ತೆ ಮಾಡಲಾಗುತ್ತದೆ.
* ಜೀವ ಬೆದರಿಕೆ ಎದುರಿಸಿದ್ದೀರಾ?
ಸಾಕಷ್ಟು ಬಾರಿ. ಬಾಹ್ಯ ಒತ್ತಡ, ಪ್ರಭಾವಿಗಳ ಬೈಯ್ಗುಳಕ್ಕೂ ಗುರಿಯಾಗಿರುವೆ.
* ಈ ಪ್ರಶಸ್ತಿಯ ಬಹುಮಾನ ಎಷ್ಟು?
ನಗದು ಬಹುಮಾನ ಇಲ್ಲ.
* ದಕ್ಷ ಅಧಿಕಾರಿಗಳ ಉತ್ತೇಜನ ಹೇಗೆ?
ತೆರಿಗೆ ವಂಚಕರು ತಪ್ಪನ್ನು ಒಪ್ಪಿಕೊಂಡು ದಂಡ ಮತ್ತು ತೆರಿಗೆ ಪಾವತಿಸಿದಾಗ, ಆ ಮೊತ್ತದ ಶೇ 10ರಷ್ಟನ್ನು ಪುರಸ್ಕಾರದ ರೂಪದಲ್ಲಿ ನೀಡಲಾಗುತ್ತಿದೆ.
* ಪುರಸ್ಕಾರಕ್ಕೆ ಗರಿಷ್ಠ ಮಿತಿ ಇದೆಯೇ?
ಹೌದು, ₹ 20 ಲಕ್ಷದ ಮಿತಿ ಇದೆ.
* ನಿಮ್ಮ ಕೆಲಸದ ಸ್ವರೂಪ ಹೇಗೆ?
ಇಂಟೆಲಿಜೆನ್ಸ್ ಏಜೆನ್ಸಿಯಲ್ಲಿ ಕೆಲಸ. ಮಾಹಿತಿ ವಿಶ್ಲೇಷಿಸಿ ತೆರಿಗೆ ವಂಚಕರನ್ನು ಗುರುತಿಸುತ್ತೇವೆ. ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸದ ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ಹೂಡಿ, ದಂಡ ಸಹಿತ ತೆರಿಗೆ ವಸೂಲಿ ಮಾಡುತ್ತೇವೆ.
* ಹೆಚ್ಚು ತೃಪ್ತಿ ನೀಡಿದ ಕೆಲಸ ಯಾವುದು?
ವಿಮಾನ ನಿಲ್ದಾಣದ ಕಸ್ಟಮ್ಸ್ ಇಂಟೆಲಿಜೆನ್ಸ್ನಲ್ಲಿ ಇದ್ದಾಗ ಗರಿಷ್ಠ ಪ್ರಮಾಣದಲ್ಲಿ ಮಾದಕ ಸರಕು ವಶಪಡಿಸಿಕೊಂಡಿರುವುದು. ವಿದೇಶಿಯರು, ಅದರಲ್ಲೂ ವಿಶೇಷವಾಗಿ ನೈಜೀರಿಯಾ, ವಿಯೆಟ್ನಾಂ ಪ್ರಜೆಗಳ ಬಂಧನ. ಡ್ರಗ್ಸ್ ಸಾಗಿಸುವಾಗ ಈಶಾನ್ಯ ಭಾರತದವರೂ ಸೆರೆ ಸಿಕ್ಕಿದ್ದಾರೆ.
* ನಿಮ್ಮ ಇತರ ಪ್ರವೃತ್ತಿ ಏನು?
ನಾನೊಬ್ಬ ಬಾಸ್ಕೆಟ್ಬಾಲ್ ಪ್ಲೇಯರ್. ಆ ಕೋಟಾದಲ್ಲಿಯೇ ಆಯ್ಕೆಯಾಗಿದ್ದೆ. ರಾಜ್ಯ ಮಟ್ಟದ ತಂಡಕ್ಕೂ ಆಡಿದ್ದೇನೆ.
* ನಿಮ್ಮ ಊರು? ಉಳಿದಿರುವ ಸೇವಾವಧಿ?
ನನ್ನೂರು ಧಾರವಾಡ, ನಾಲ್ಕೂವರೆ ವರ್ಷಗಳ ಸೇವಾವಧಿ ಇದೆ.
–ಕೇಶವ ಜಿ. ಝಿಂಗಾಡೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.