ADVERTISEMENT

ಅಣ್ಣಾ- ಅರವಿಂದ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST

ಅಣ್ಣಾ ಮಣ್ಣಿನ ಮಗ,
ಧೀರ ಸೈನಿಕ, ದೇಶಭಕ್ತ,
ಪ್ರಾಮಾಣಿಕ.
ದುಷ್ಟರಾರು, ಶಿಷ್ಟರಾರು
ಎಂದರಿಯದ ಅಮಾಯಕ.
ಹಜಾರೆ ಹಸುವಿನಷ್ಟೇ ಮುಗ್ಧ
ಬೆಳ್ಳಗಿದ್ದದ್ದೆಲ್ಲ ಹಾಲೆಂದು ನಂಬುವಾತ,
ನಿಷ್ಠಾವಂತ ಗಾಂಧಿ ಅನುಯಾಯಿ.
ಕೇಜ್ರಿವಾಲ್?
ಕ್ರೇಜಿ ಅಲ್ಲ ಅರಿವು ಉಳ್ಳಾತ ಆತ
ಅರವಿಂದ!
ಭ್ರಷ್ಟ ಅಧಿಕಾರಸ್ಥರ ಷಡ್ಯಂತ್ರ
ಸ್ವಾರ್ಥಿ ರಾಜಕಾರಣಿಗಳ ಚಕ್ರವ್ಯೂಹ
ಭೇದಿಸಬಲ್ಲ ಚತುರ ನಾಯಕ
ಸರ್ದಾರ್ ಪಟೇಲರಂತೆ
ನಿಷ್ಠುರ ರಾಷ್ಟ್ರಪ್ರೇಮಿ
ಸಾಧ್ಯವಾದರೇ
ಅಣ್ಣಾ ಅರವಿಂದರ ಸಮ್ಮಿಳನ
ಆಗುವುದು ಭಾರತ ದೇಶದ ಕಲ್ಯಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.