ADVERTISEMENT

50 ವರ್ಷಗಳ ಹಿಂದೆ: ಸೋಮವಾರ 6.3.1972

ಪ್ರಜಾವಾಣಿ ವಿಶೇಷ
Published 5 ಮಾರ್ಚ್ 2022, 20:15 IST
Last Updated 5 ಮಾರ್ಚ್ 2022, 20:15 IST

ತುಮಕೂರಿನಲ್ಲಿ ಘರ್ಷಣೆ: ಕಲ್ಲೆಸೆತ, ಚಪ್ಪರಕ್ಕೆ ಬೆಂಕಿ, ಐದು ಮಂದಿಗೆ ಗಾಯ

ತುಮಕೂರು, ಮಾರ್ಚ್ 5– ಇಂದು ಇಲ್ಲಿಯ ಮತದಾನ ಕೇಂದ್ರವೊಂದರ ಬಳಿ ಜನ ಸಂಘ ಮತ್ತು ಆಡಳಿತ ಕಾಂಗ್ರೆಸ್ ಬೆಂಬಲಿಗರ ನಡುವೆ ತೀವ್ರ ಘರ್ಷಣೆಯಾಗಿ ಕಲ್ಲು ತೂರಾಟದಲ್ಲಿ ಕನಿಷ್ಠ 5 ಮಂದಿ ಗಾಯಗೊಂಡಿದ್ದಾರೆ.

ಬೆಳಿಗ್ಗೆ 11 ಗಂಟೆ ವೇಳೆಗೆ ಲೋಕೋಪಯೋಗಿ ಇಲಾಖೆ ಕಚೇರಿಗಳ ಬಳಿ ದೊಡ್ಡ ಗುಂಪೊಂದು ಬಿ.ಎಚ್.ರಸ್ತೆಯಲ್ಲಿ ಹುಲ್ಲಿನ ಮೇಲ್ಚಾವಣಿಯಲ್ಲಿದ್ದ ಹೋಟೆಲೊಂದಕ್ಕೆ ಬೆಂಕಿ ಹಚ್ಚಿತು.

ADVERTISEMENT

ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಮಂದಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.