ಹದಿನೈದುಎಕರೆತರಿಜಮೀನಿಗೆ ರಾಜ್ಯ ಸಂಸ್ಥಾ ಕಾಂಗ್ರೆಸ್ ಕರೆ
ಬೆಂಗಳೂರು, ಜೂನ್ 25 –ಹದಿನೈದುಎಕರೆಸ್ಟಾಂಡರ್ಡ್ ಜಮೀನು, 75 ಎಕರೆಗಳಿಗೆ ಮೀರದಂತೆ ಖುಷ್ಕಿ ಜಮೀನು ಪರಿಮಿತಿ ಹಾಗೂ ನಗರಾಸ್ಥಿಯ ಮೇಲೆ 5 ಲಕ್ಷ ರೂ. ಪರಿಮಿತಿ ಇರಬೇಕೆಂದು ಇಂದು ಇಲ್ಲಿ ನಡೆದ ಮೈಸೂರು ಪ್ರದೇಶ ಕಾಂಗ್ರೆಸ್ (ಸಂಸ್ಥಾ) ಸಮಿತಿ ಒತ್ತಾಯ ಮಾಡಿತು.
ಈ ಕ್ರಮಗಳನ್ನು ಶೀಘ್ರವಾಗಿ ಕಾರ್ಯರೂಪಕ್ಕೆ ತರಬೇಕೆಂದೂ ಸಭೆ ಒತ್ತಾಯ ಮಾಡಿತು.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶ್ರೀ ವೀರೇಂದ್ರ ಪಾಟೀಲ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.