ADVERTISEMENT

ಗುರುವಾರ, 11-4-1963

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಎಐಸಿಸಿ ತಂಡದಿಂದ ಪಕ್ಷವಿರೋಧಿ ಕಾಂಗ್ರೆಸ್ಸಿಗರ ನಡವಳಿಕೆ ವೀಕ್ಷಣೆ
ಹೈದರಾಬಾದ್, ಏ. 10- `ಕಾಂಗ್ರೆಸ್ಸಿಗರು ಅಕ್ರಮವಾಗಿ ನಡೆದು ಕೊಂಡಿರುವರೇ?' ಎಂಬುದನ್ನು ಪತ್ತೆ ಮಾಡಲು ಉಪಚುನಾವಣೆ ನಡೆಯಲಿರುವ ಎಲ್ಲ ಪಾರ್ಲಿಮೆಂಟರಿ ಹಾಗೂ ರಾಜ್ಯ ಶಾಸನ ಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಳುಹಿಸುವುದೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಡಿ. ಸಂಜೀವಯ್ಯನವರು ಇಂದು ಇಲ್ಲಿ ತಿಳಿಸಿದರು.

ಕಾಶ್ಮೀರ ವಿಭಜನೆಗೆ ಅಮೆರಿಕಾ ಸೂಚಿಸಿಲ್ಲ
ಢಾಕಾ, ಏ. 10- ಕಾಶ್ಮೀರ ವಿವಾದದ ಪರಿಹಾರವಾಗಿ ಕಾಶ್ಮೀರದ ವಿಭಜನೆಯಾಗಬೇಕೆಂದು ಅಮೆರಿಕಾ ಸೂಚಿಸಿಲ್ಲವೆಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವ ಜಲ್ಫಿಕಾರ್ ಅಲಿ ಭುಟ್ಟೊ ಇಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT