ADVERTISEMENT

ಗುರುವಾರ, 12-7-1962

​ಪ್ರಜಾವಾಣಿ ವಾರ್ತೆ
Published 11 ಜುಲೈ 2012, 19:30 IST
Last Updated 11 ಜುಲೈ 2012, 19:30 IST

ಚೀಣೀ ಮುತ್ತಿಗೆ ಮುಂದುವರಿಕೆ
ನವದೆಹಲಿ, ಜುಲೈ 11 -ಲಡಖ್‌ನ ಗಾಲ್ವವ್ ನದಿ ಕಣಿವೆಯಲ್ಲಿರುವ ಭಾರತೀಯ ಸೇನಾ ಠಾಣ್ಯದ ಸುತ್ತ ಚೀಣಿ ಸೇನೆಗಳು ಸುತ್ತುವರಿದಿರುವುದರಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲವೆಂದು ಭಾರತ ಸರ್ಕಾರದ ಅಧಿಕೃತ ವಕ್ತಾರರೊಬ್ಬರು ಇಲ್ಲಿ ಇಂದು ತಿಳಿಸಿದರು.

ಪಾಕ್ ಬೇಡಿಕೆಗೆ ನೆಹ್ರೂ ನಕಾರ
ಶ್ರೀನಗರ್, ಜುಲೈ 11 - ಕಾಶ್ಮೀರದಲ್ಲಿ ಮಹುಮಂದಿ ಮುಸ್ಲಿಮರಿರುವುದರಿಂದ ಅದು ಪಾಕಿಸ್ತಾನದ ಭಾಗವಾಗಬೇಕೆಂಬ ಪಾಕಿಸ್ತಾನದ ಕೇಳಿಕೆಯನ್ನು ಪ್ರಧಾನಿ ನೆಹರು ಖಚಿತ ರೀತಿಯಲ್ಲಿ ತಿರಸ್ಕರಿಸಿದರು.

ಕಾವೇರಿ ನದೀ ಮಂಡಳಿ ಅನಗತ್ಯ
ಮದರಾಸ್, ಜುಲೈ 11 - ಕಾವೇರಿ ಜಲಾನಯನ ಭೂಮಿಗೆ ಸಂಬಂಧಿಸಿದಂತೆ ನದೀ ಮಂಡಳಿಯೊಂದನ್ನು ರಚಿಸುವ ಅಗತ್ಯವಿಲ್ಲವೆಂದು ಮದರಾಸ್ ಸರಕಾರ ಭಾರತ ಸರ್ಕಾರಕ್ಕೆ ತಿಳಿಸಿದೆ. ಕಾವೇರಿ ನದಿಯ ಪೂರ್ವ ಪ್ರಯೋಜನವನ್ನು ಈಗ ಪಡೆಯಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.