ADVERTISEMENT

ಗುರುವಾರ, 2-2-1962,

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಅಷ್ಟಗ್ರಹ ಕಾರಣ ಪ್ರಳಯ,ಮತ್ತಿತರ ಭೀತಿ ನಿರಾಧಾರ
ಬೆಂಗಳೂರು, ಫೆ. 1 -
1962ರ ಫೆಬ್ರುವರಿ 3 ರಿಂದ 5ನೇ ತಾರೀಖಿನವರೆಗೆ ಸೇರುವ ಅಷ್ಟಗ್ರಹಕೂಟದ ಪರಿಣಾಮವಾಗಿ ಪ್ರಳಯ ಸಂಭವಿಸುವುದೆಂಬ ನಂಬಿಕೆ ಹಾಗೂ ಭೀತಿ ನಿರಾಧಾರವಾದುದೆಂದು ಅಂತರರಾಷ್ಟ್ರೀಯ ಪ್ರಖ್ಯಾತಿ ಪಡೆದಿರುವ ಜ್ಯೋತಿಷಿ ಪ್ರೊಫೆಸರ್ ಶ್ರೀ ಬಿ. ವಿ. ರಾಮನ್ ಅವರು ಸ್ಪಷ್ಟಪಡಿಸಿದರು.

ರೇಡಿಯೋ ಮೂಲಕಪಕ್ಷಗಳ ಪ್ರಚಾರ ರದ್ದು
 ನವದೆಹಲಿ, ಫೆ. 1
- ಚುನಾವಣಾ ಪ್ರಸಾರ ಭಾಷಣಗಳಿಗಾಗಿ ನಿಶ್ಚಿತವಾಗಿದ್ದ ಕಾಲಾವಧಿಯ ಹಂಚಿಕೆ ಬಗ್ಗೆ ರಾಜಕೀಯ ಪಕ್ಷಗಳು ಒಂದು ಒಪ್ಪಂದಕ್ಕೆ ಬರದೇ ಹೋದದರಿಂದ ರೇಡಿಯೋ ಮೂಲಕ ಚುನಾವಣಾ ಪ್ರಚಾರ ಭಾಷಣಗಳ ಪ್ರಸಾರ ಯೋಜನೆಯನ್ನು ಕೈಬಿಡಲಾಗಿದೆ ಎಂದು ಚುನಾವಣಾ ಮಂಡಲಿಯು ಪ್ರಕಟಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.