ಆಕ್ರಮಣ ನಿರೋಧಕ್ಕೆ ಭಾರತದ ಸಿದ್ಧತೆ ನಿಲ್ಲದು
ಗೌಹಾತಿ, ಡಿ. 5 - ಭಾರತದ ವಿರುದ್ಧ ಚೀಣ ಎಸಗಿರುವ ಆಕ್ರಮಣವೂ `ನೀಫಾ', ಅಸ್ಸಾಮ್, ಭಾರತಗಳಿಗೇ ಅಲ್ಲದೆ ಇಡೀ ವಿಶ್ವಕ್ಕೇ ಒಂದು ಸಮಸ್ಯೆಯಂತಿದೆಯೆಂದು ಪ್ರಧಾನ ಮಂತ್ರಿ ನೆಹರೂರವರು ಇಂದು ಇಲ್ಲಿ ತಿಳಿಸಿದರು.
`ನಮ್ಮ ಗಡಿಯಲ್ಲಿ ನಡೆದಿರುವುದು ಒಂದು ಐತಿಹಾಸಿಕ ವಿಷಯವಾಗಿದೆ. ಆದ ಕಾರಣ ಇಡೀ ವಿಶ್ವದ ಗಮನ ನಮ್ಮ ಮೇಲೆ ಕೇಂದ್ರೀಕೃತವಾಗಿದೆ ವಿಶ್ವ ಇತಿಹಾಸದಲ್ಲಿ ಇದೊಂದು ಪರ್ವಕಾಲ' ಎಂದೂ ನೆಹರೂರವರು ಭಾರಿ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.