ADVERTISEMENT

ಜನಮತಗಣನೆಗೆ ಭಾರತ ಸಿದ್ಧವಿಲ್ಲ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:30 IST
Last Updated 16 ಅಕ್ಟೋಬರ್ 2012, 19:30 IST

ಬುಧವಾರ, 17-10-1962

ಜನಮತಗಣನೆಗೆ ಭಾರತ ಸಿದ್ಧವಿಲ್ಲ
ವಿಶ್ವರಾಷ್ಟ್ರಸಂಸ್ಥೆ, ಅ. 16- ಭಾರತ, ಪಾಕಿಸ್ತಾನಗಳಲ್ಲಿನ ಅಲ್ಪಸಂಖ್ಯಾತರ ನಡುವೆ ಘರ್ಷಣೆ ಸಂಭವಿಸಿ ಅವರ ಸರ‌್ವನಾಶಕ್ಕೆ ಕಾರಣವಾಗಿರುವುದರಿಂದ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಜನಮತ ಗಣನೆಗೆ ಭಾರತ ಸಿದ್ಧವಾಗಿಲ್ಲವೆಂದು ವಿಶ್ವರಾಷ್ಟ್ರ ಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಬಿ. ಎನ್. ಚಕ್ರವರ್ತಿಯವರು ನಿನ್ನೆ ವಿಶ್ವರಾಷ್ಟ್ರ ಸಂಸ್ಥೆಯಲ್ಲಿ ತಿಳಿಸಿದರು.

ಹಟ್ಟಿ ಚಿನ್ನದ ಗಣಿ ಕೆ.ಜಿ.ಎಫ್. ಗಿಂತ ಲಾಭದಾಯಕ
ಬಳ್ಳಾರಿ, ಅ. 16 - ಕೆ.ಜಿ.ಎಫ್. ಗಣಿಗಳಿಗಿಂತ ಹಟ್ಟಿ ಚಿನ್ನದ ಗಣಿಗಳು ಹೆಚ್ಚಿನ ಲಾಭದಾಯಕವಾಗಿದ್ದು ತಿಂಗಳಿಗೆ ಎರಡೂವರೆ ಲಕ್ಷ ರೂಪಾಯಿಗಳಿಗಿಂತ ಅಧಿಕವಾದ ನಿವ್ವಳ ಆದಾಯ ಬರುತ್ತಿದೆಯೆಂದು ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಶ್ರೀ ಕೆ. ಮಲ್ಲಪ್ಪನವರು ಇದೇ 13 ರಂದು ಇಲ್ಲಿ ಪ್ರಜಾವಾಣಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT