ಜಂಬೂಸವಾರಿ ವೀಕ್ಷಣೆ
ಮೈಸೂರು, ಅ. 18 - ಜಗತ್ ಪ್ರಸಿದ್ಧ ಮೈಸೂರು ನವರಾತ್ರಿಯ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯನ್ನು ಇಂದು ಇಲ್ಲಿ ಸುಮಾರು ನಾಲ್ಕು ಲಕ್ಷ ಜನ ವೀಕ್ಷಿಸಿದರು. ಭಾರತದ ನಾನಾ ಭಾಗಗಳಿಂದ ಸಹಸ್ರಾರು ಜನ ಈ ವೈಭವದ ಉತ್ಸವ ನೋಡಿದರು.
ನಿಕಟ ಸಂಪರ್ಕ ಅಗತ್ಯ
ನವದೆಹಲಿ, ಅ. 18 - `ಒಂದು ಭಾಷೆಯು ಪರಿಣಾಮಕಾರಿ ಯಾಗಬೇಕಾದರೆ ಅದು ಪಂಡಿತರ ಭಾಷೆಯಾದರೆ ಸಾಲದು; ಗ್ರಾಂಥಿಕ ಭಾಷೆಗೂ ಆಡು ಭಾಷೆಗೂ ಬಹಳ ವ್ಯತ್ಯಾಸ ವಿರಬಾರದು.
ಈ ವ್ಯತ್ಯಾಸ ಕಡಿಮೆಯಾಗಿ ಭಾಷೆ ಸಾಮಾನ್ಯರಿಗೆ ಅರ್ಥವಾಗುವಂತಾದರೆ~ ಅದು ಬೆಳೆಯುವುದೆಂದು ಪ್ರಧಾನ ಮಂತ್ರಿ ನೆಹರೂ ಇಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.