ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ಪ್ರಾತಿನಿಧ್ಯ
ಬೆಂಗಳೂರು, ಜುಲೈ 22 - ಕೇಂದ್ರ ಮಂತ್ರಿಮಂಡಲದಲ್ಲಿ ಮೈಸೂರು ರಾಜ್ಯಕ್ಕೆ ಪ್ರಾತಿನಿಧ್ಯ ನೀಡಬೇಕಾದ ಅಗತ್ಯವನ್ನು ತಾವು ಪ್ರಧಾನಮಂತ್ರಿ ಶ್ರೀ ನೆಹರೂರವರ ಗಮನಕ್ಕೆ ತಂದಿರುವುದಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.
ಮಧ್ಯಾಹ್ನ ದೆಹಲಿಯಿಂದ ಹಿಂತಿರುಗಿದ ಶ್ರೀ ನಿಜಲಿಂಗಪ್ಪನವರು ವರದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರದಲ್ಲಿ ಇಂದು ಸಚಿವ ಮಟ್ಟದಲ್ಲಾಗಲೀ, ಸ್ಟೇಟ್ ಸಚಿವ ಮಟ್ಟದಲ್ಲಾಗಲೀ ಉಪಸಚಿವ ಮಟ್ಟದಲ್ಲಾಗಲೀ ಮೈಸೂರು ರಾಜ್ಯಕ್ಕೆ ಪ್ರಾತಿನಿಧ್ಯವಿಲ್ಲದಿರುವುದು ದುರದೃಷ್ಟಕರವೆಂದೂ, ಈ ವಿಷಯವನ್ನು ತಾವು ನೆಹರುರವರ ಗಮನಕ್ಕೆ ತಂದು ಮೈಸೂರಿಗೆ ತಕ್ಕ ಪ್ರಾತಿನಿಧ್ಯವಿರಬೇಕೆಂದು ಒತ್ತಾಯ ಪಡಿಸಿರುವುದಾಗಿಯೂ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.