ADVERTISEMENT

ಶನಿವಾರ, 1–6–1968

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

ಪಂಪ್‌ಸೆಟ್‌ಗಳಿಗೆ ವಿದ್ಯುತ್: ವ್ಯಕ್ತಿಗಳಿಗೆ ಠೇವಣಿ ವಿನಾಯಿತಿ

ಬೆಂಗಳೂರು, ಮೇ 31– ಪಂಪ್‌ ಸೆಟ್‌ಗಳಿಗೆ ವಿದ್ಯುಚ್ಛಕ್ತಿ ನೀಡಲು ಆಗುವ ವೆಚ್ಚದ ಶೇಕಡ ಐವತ್ತರಷ್ಟನ್ನು ವಿದ್ಯುಚ್ಛಕ್ತಿ ಮಂಡಲಿಯಲ್ಲಿ ‘ಠೇವಣಿ’ ಇಡಬೇಕೆಂಬ ಶರತ್ತನ್ನು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಕೈಬಿಡಲು ಸರಕಾರ ಇಂದು ನಿರ್ಧರಿಸಿತು.

ಆಡಳಿತದಲ್ಲಿ ದಕ್ಷತೆ ಹೆಚ್ಚಿಸಲು ಉನ್ನತಾಧಿಕಾರಿಗಳ ಸಭೆ ಸದ್ಯದಲ್ಲೆ

ADVERTISEMENT

ಬೆಂಗಳೂರು, ಮೇ 31– ರಾಜ್ಯದಲ್ಲಿ ಆಡಳಿತವನ್ನು ಹೆಚ್ಚು ದಕ್ಷತೆಯಿಂದ ಕೂಡಿದುದೂ ಪರಿಣಾಮಕಾರಿಯಾದುದೂ ಆಗುವಂತೆ ಮಾಡುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸದ್ಯದಲ್ಲೇ ಉನ್ನತ ಅಧಿಕಾರಿಗಳ ಸಭೆಯೊಂದನ್ನು ತಾವು ಕರೆಯಲಿರುವುದಾಗಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವರದಿಗಾರರಿಗೆ ತಿಳಿಸಿದರು.

ಸಚಿವರ ಆಸ್ತಿ ವಿವರ ಕೇಳುವುದಾಗಿ ಮುಖ್ಯಮಂತ್ರಿ ಶ್ರೀ ಪಾಟೀಲ್

ಬೆಂಗಳೂರು, ಮೇ 31– ತಮ್ಮ ಆಸ್ತಿ ಮತ್ತು ಸಾಲದ ವಿವರಗಳನ್ನು ನೀಡುವಂತೆ ಹೊಸ ಮಂತ್ರಿಗಳೂ, ಸ್ಟೇಟ್‌ ಮಂತ್ರಿಗಳೂ, ಉಪಮಂತ್ರಿಗಳನ್ನೂ ಕೇಳಲಿರುವುದಾಗಿ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಇಂದು ವರದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.