ADVERTISEMENT

ಶಸ್ತ್ರಾಸ್ತ್ರ ನೆರವಿನ ಬಳಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2012, 20:54 IST
Last Updated 2 ಡಿಸೆಂಬರ್ 2012, 20:54 IST

ನವದೆಹಲಿ, ಡಿ. 2-ಭಾರತದ ಶಾಂತಿಪ್ರಿಯವಾದ ಹಾಗೂ ಎಲ್ಲ ರಾಷ್ಟ್ರಗಳೊಡನೆ ಸ್ನೇಹದಿಂದಿರುವ ನೀತಿಯನ್ನು “ಪಾಕಿಸ್ತಾನದೊಡನೆಯ ನಮ್ಮ ಸಂಬಂಧಗಳಲ್ಲಿ ಹೆಚ್ಚು ವಿಶೇಷವಾಗಿ ಅನ್ವಯಿಸಲಾಗುವುದೆಂದು” ಪ್ರಧಾನಮಂತ್ರಿ ನೆಹರೂರವರು ಪಾಕಿಸ್ತಾನದ ಅಧ್ಯಕ್ಷರಾದ ಅಯೂಬ್ ಖಾನ್‌ರಿಗೆ ಭರವಸೆ ನೀಡಿದ್ದಾರೆ.

ನ. 12 ರಂದು ಅಯೂಬ್‌ಖಾನರಿಗೆ ಬರೆದ ಪತ್ರವೊಂದರಲ್ಲಿ “ಪಾಕಿಸ್ತಾನದೊಡನೆ ಘರ್ಷಣೆ ನಡೆಯುವ ವಿಚಾರವು ನಮಗೆ ಹಿಡಿಸದ ವಿಷಯ” ಎಂದಿದ್ದಾರೆ.

ಸೇನಾ ವಾಪಸಾತಿಗೆ ಸೂಚನೆ
ತೇಜಪುರ, ಡಿ. 2- ಬೊಮ್ಡಿಲಾದಿಂದ ಕೆಲವು ವಾಹನಗಳು ಹೊರಕ್ಕೆ ಹೋಗುತ್ತಿರುವುದಷ್ಟೇ ಚೀಣಿ ಸೈನ್ಯದ ವಾಪಸಾತಿಯು ನಡೆದಿರಬಹುದಾದುದರ ಏಕೈಕ ಸೂಚನೆಯೆಂದು ಇಲ್ಲಿನ ಅಧಿಕಾರಯುತ ಮಿಲಿಟರಿ ಮೂಲಗಳು ತಿಳಿಸಿವೆ.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.