ಭೂ ಸುಧಾರಣೆಗೆ ವಿಧಾನ ಸಭೆಯ ಬಹುಮತದ ಒಪ್ಪಿಗೆ
ಬೆಂಗಳೂರು, ಸೆ. 15 - ಹದಿಮೂರು ದಿನಗಳ ಚರ್ಚೆಯ ನಂತರ ಭೂ ಸುಧಾರಣಾ ಮಸೂದೆಗೆ ಸಂಬಂಧಿಸಿದ ಜಂಟಿ ಸೆಲೆಕ್ಟ್ ಸಮಿತಿ ವರದಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ವಿಧಾನ ಸಭೆಯು ಇಂದು ಬಹುಮತದಿಂದ ಅಂಗೀಕರಿಸಿತು.
ಪಂಜಾಬಿನ ನಾಲ್ಕು ಕಡೆಗಳಲ್ಲಿ ಗುರುದ್ವಾರಗಳ ಶೋಧನೆ
ಅಂಬಾಲ, ಸೆ. 15 - ಪೊಲೀಸರು ಇಂದು ಇಲ್ಲಿನ ಮಂಜಿಸಾಹೇಬ್ ಗುರುದ್ವಾರವನ್ನೂ, ಲೂಧಿಯಾನಾದಲ್ಲಿನ ಕಾಲ್ಗಿಧರ್ ಗುರುದ್ವಾರವನ್ನೂ, ಫತೇಘರ್ ಸಾಹಿಬ್ ಮತ್ತು ನಾಭಾಗಳಲ್ಲಿನ ಗುರುದ್ವಾರಗಳನ್ನು ಪ್ರವೇಶಿಸಿ, ಕೆಲವು ಮಂದಿ ಘೋಷಿತ ಅಪರಾಧಿಗಳೂ ಸೇರಿ ಸುಮಾರು 44 ಮಂದಿ ಅಕಾಲಿಗಳನ್ನು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.