
ಪ್ರಜಾವಾಣಿ ವಾರ್ತೆಭೂ ಸುಧಾರಣೆಗೆ ವಿಧಾನ ಸಭೆಯ ಬಹುಮತದ ಒಪ್ಪಿಗೆ
ಬೆಂಗಳೂರು, ಸೆ. 15 - ಹದಿಮೂರು ದಿನಗಳ ಚರ್ಚೆಯ ನಂತರ ಭೂ ಸುಧಾರಣಾ ಮಸೂದೆಗೆ ಸಂಬಂಧಿಸಿದ ಜಂಟಿ ಸೆಲೆಕ್ಟ್ ಸಮಿತಿ ವರದಿಯನ್ನು ಕೆಲವು ತಿದ್ದುಪಡಿಗಳೊಂದಿಗೆ ವಿಧಾನ ಸಭೆಯು ಇಂದು ಬಹುಮತದಿಂದ ಅಂಗೀಕರಿಸಿತು.
ಪಂಜಾಬಿನ ನಾಲ್ಕು ಕಡೆಗಳಲ್ಲಿ ಗುರುದ್ವಾರಗಳ ಶೋಧನೆ
ಅಂಬಾಲ, ಸೆ. 15 - ಪೊಲೀಸರು ಇಂದು ಇಲ್ಲಿನ ಮಂಜಿಸಾಹೇಬ್ ಗುರುದ್ವಾರವನ್ನೂ, ಲೂಧಿಯಾನಾದಲ್ಲಿನ ಕಾಲ್ಗಿಧರ್ ಗುರುದ್ವಾರವನ್ನೂ, ಫತೇಘರ್ ಸಾಹಿಬ್ ಮತ್ತು ನಾಭಾಗಳಲ್ಲಿನ ಗುರುದ್ವಾರಗಳನ್ನು ಪ್ರವೇಶಿಸಿ, ಕೆಲವು ಮಂದಿ ಘೋಷಿತ ಅಪರಾಧಿಗಳೂ ಸೇರಿ ಸುಮಾರು 44 ಮಂದಿ ಅಕಾಲಿಗಳನ್ನು ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.