ADVERTISEMENT

ಶುಕ್ರವಾರ, 6-9-1963

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಆಡಳಿತ ಭಾಷೆಯಾಗಿ ಕನ್ನಡ
ಬೆಂಗಳೂರು, ಸೆ. 5-  ರಾಜ್ಯದಲ್ಲಿ ಕನ್ನಡವನ್ನು ಆಡಳಿತ ಭಾಷೆ ಮಾಡಲು ಅವಕಾಶ ಕಲ್ಪಿಸುವ ಅಧಿಕೃತ ಭಾಷಾ ಮಸೂದೆಯನ್ನು ಇಂದು ವಿಧಾನ ಸಭೆಯು ಅಂಗೀಕರಿಸಿತು.

ಮಸೂದೆಯ ಮೇಲಿನ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಆದಷ್ಟು ಜಾಗ್ರತೆ ಕನ್ನಡವನ್ನು ರಾಜ್ಯದ ಎಲ್ಲ ಕಡೆ ಎಲ್ಲ ಕ್ಷೇತ್ರಗಳಲ್ಲಿ ಆಡಳಿತ ಭಾಷೆಯಾಗಿ ಜಾರಿಗೆ ತರುವುದಾಗಿ ಭರವಸೆ ನೀಡಿದರು.

ಸಭೆಯ ಎಲ್ಲ ಕಡೆಗಳಿಂದಲೂ ಮಸೂದೆಗೆ ಸ್ವಾಗತ ದೊರಕಿದುದಕ್ಕಾಗಿ ಮುಖ್ಯಮಂತ್ರಿ ಸಂತೋಷ ವ್ಯಕ್ತಪಡಿಸುತ್ತಿದ್ದಾಗ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯ ಶ್ರೀ ಬಿ.ಪಿ. ಕದಂರವರು “ಇಲ್ಲಿ ನಮ್ಮ ಅಭಿಪ್ರಾಯ ಹೇಳಲು ಅವಕಾಶವೇ ಸಿಕ್ಕಿಲ್ಲ. ನಮ್ಮ ವಿರೋಧವಿದೆ” ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.