ಇನ್ನೆರಡು ವರ್ಷ ರಾಜ್ಯಕ್ಕೆ ಭಾರಿ ಹಣದ ಮುಗ್ಗಟ್ಟು
ಮೈಸೂರು, ಡಿ. 15– ಬರುವ ಎರಡು ವರ್ಷಗಳಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಇನ್ನೂ ಕೆಟ್ಟು ಬಹಳ ಕಷ್ಟ ಸ್ಥಿತಿ ಉಂಟಾಗಬಹುದೆಂಬ ಆತಂಕ
ವನ್ನು ಹಣಕಾಸಿನ ಸಚಿವ ಶ್ರೀ ಬಿ.ಡಿ. ಜತ್ತಿ ಅವರು ಇಂದು ಇಲ್ಲಿ ವ್ಯಕ್ತಪಡಿಸಿದರು.
ಮುಂದೆ ನ್ಯಾಯಾಂಗ ತನಿಖೆ ಎದುರಿಸಬೇಕಾದೀತೆಂದು ಮುಖ್ಯಮಂತ್ರಿಗೆ ಎಚ್ಚರಿಕೆ
ಬೆಂಗಳೂರು, ಡಿ. 15– ಆಡಳಿತದಲ್ಲಿ ಭ್ರಷ್ಟಾಚಾರದ ಬಗ್ಗೆ ಬರುವ ದೂರುಗಳನ್ನು ತಿರಸ್ಕರಿಸುತ್ತಾ ಹೋದರೆ, ಮುಂದೆ ಪಂಜಾಬಿನ ಮುಖ್ಯಮಂತ್ರಿ ಹಾಗೆ ನ್ಯಾಯಾಂಗ ವಿಚಾರಣೆಗೆ ಗುರಿಯಾಗಬೇಕಾದೀತೆಂದು ಪಿಎಸ್ಪಿ ಸದಸ್ಯ ಶ್ರೀ ಎಸ್.ಎಂ.ಕೃಷ್ಣ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.