ನೆಹ್ರೂ ಆರೋಗ್ಯದ ಬಗ್ಗೆ ಲಂಡನ್ನಲ್ಲಿ ಆತಂಕ; ಕಾತರ
( ಡಿ.ವಿ.ತಹಮಣಕರ್ ಅವರಿಂದ)
ಲಂಡನ್, ಜುಲೈ 15- ವಾರಾಂತ್ಯದಲ್ಲಿ ಇಲ್ಲಿಗೆ ಬಂದ ವರದಿಗಳು ಭಾರತ ಪ್ರಧಾನಿ ನೆಹರೂ ಅವರ ಆರೋಗ್ಯದ ಬಗ್ಗೆ ಆತಂಕ ಹಾಗೂ ಕುತೂಹಲ ವ್ಯಕ್ತಪಡಿಸಿದೆ.
ಡೈಲಿ ಹೆರಾಲ್ಡ್ ಪತ್ರಿಕೆಯು ನಿನ್ನೆ ವಿಶೇಷ ಲೇಖನ ಪ್ರಕಟಿಸಿತು. ನೆಹರೂ ಅವರ ಆರೋಗ್ಯ ಸುಧಾರಿಸದಿದ್ದರೆ? ಎಂದು ಪ್ರಶ್ನಿಸಿರುವ ಲೇಖಕ ರಸಲ್ಸ್ಟರ್ ಎಲ್ಲೆಲ್ಲೂ ಈ ಮಾತು ಕೇಳಿ ಬರುತ್ತಿದೆ ಎಂದಿದ್ದಾರೆ.
ನೆಹ್ರೂ ನಂತರ ಯಾರೆಂಬ ಬೃಹತ್ ಸಮಸ್ಯೆ ಪರಿಹಾರ
ಬೆಂಗಳೂರು, ಜುಲೈ 15- ನೆಹರು ನಂತರ ಯಾರು? ಅನೇಕ ವರ್ಷಗಳ ಈ ಪ್ರಶ್ನೆಗೆ ಇಂದು ಮೊದಲಬಾರಿಗೆ ಒಂದು ಉತ್ತರ ದೊರಕಿತು. ತಮ್ಮ ಉತ್ತರಾಧಿಕಾರಿಗಳು ಯಾರೆಂಬುದನ್ನು ತಿಳಿಸಿದರೂ ನೆಹರೂರವರೇ.
ಲಂಡನ್ನಿನ ಡೈಲಿ ಹೆರ್ಡಾ ಪತ್ರಿಕೆಯಲ್ಲಿ ಇಂದು ಲೇಖನ ಬರೆದಿರುವ ರಸಲ್ಸ್ಟರ್ರವರು ನೆಹ್ರೂ ಅನಂತರ ಯಾರು? ಎಂಬ ಪ್ರಶ್ನೆ ಪ್ರಸ್ತಾಪಿಸುತ್ತಾ ಇಬ್ಬರು ಎದ್ದು ಕಾಣುತ್ತಾರೆ: ಅರ್ಥಸಚಿವ ಮೊರಾರ್ಜಿ ದೇಸಾಯಿ, ರಕ್ಷಣಾ ಸಚಿವ ಕೃಷ್ಣಮೆನನ್ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.