ADVERTISEMENT

ಸೋಮವಾರ, 23–9–1963

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ಮೈಸೂರು ಬಳಿ ಒಂದು ಡಿವಿಜನ್‌ ಸೇನೆ ಇಡಲು ಮುಖ್ಯಮಂತ್ರಿ ಸಲಹೆ
ಮೈಸೂರು, ಸೆ. 22– ಮೈಸೂರು ನಗರದ ಬಳಿ ಸಾಕಷ್ಟು ಭೂಮಿಯ, ನೀರಿನ ಹಾಗೂ ಇತರ ಸೌಕರ್ಯಗಳಿರುವುದರಿಂದ ಭಾರತೀಯ ಸೈನ್ಯದ ಒಂದು ಡಿವಿಜನ್‌ ಸೇನೆ ಇಡಲು ಕೇಂದ್ರ ಸರ್ಕಾರಕ್ಕೆ ತಾವು ಸಲಹೆ ಮಾಡಿರುವುದಾಗಿ ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ಸನ್ಮಾನ ಸಮಾರಂಭವೊಂದರಲ್ಲಿ ಶ್ರೀ ನಿಜಲಿಂಗಪ್ಪನವರು ಮಾತನಾಡುತ್ತ ಈ ಬಗ್ಗೆ ತಾವು ರಕ್ಷಣಾ ಸಚಿವ ಶಾಖೆಯೊಂದಿಗೆ ವ್ಯವಹರಿಸುತ್ತಿರುವುದಾಗಿಯೂ ಬೆಂಗಳೂರು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಅಲ್ಲಿರುವ ಕೆಲವು ಡಿವಿಜನ್‌ಗಳನ್ನು ಬೇರೆ ಪ್ರದೇಶಗಳಿಗೆ ವರ್ಗಾಯಿಸಲು ರಕ್ಷಣಾ ಸಚಿವ ಶಾಖೆ ಒಪ್ಪಿರುವುದಾಗಿಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.