ವಿರೋಧ ಪಕ್ಷಗಳ ಎಲ್ಲಸದಸ್ಯರ ಗೈರು ಹಾಜರಿ
ಲಕ್ನೋ, ಫೆ. 6- ಉತ್ತರಪ್ರದೇಶ ವಿಧಾನಮಂಡಲದ ಆಯವ್ಯಯದ ಅಧಿವೇಶನವು ಇಂದು ಆರಂಭವಾಯಿತು. ಉಭಯ ಸದನಗಳ ಜಂಟಿ ಸಭೆಯನ್ನುದ್ದೇಶಿಸಿ ರಾಜ್ಯಪಾಲ ಶ್ರೀ ಬಿ. ರಾಮಕೃಷ್ಣರಾಯರು ಆರಂಭ ಭಾಷಣ ಮಾಡಿದಾಗ ವಿರೋಧ ಪಕ್ಷಗಳ ಸದಸ್ಯರಾರೂ ಹಾಜರಿರಲಿಲ್ಲ.
ಸಸ್ಪೆನ್ಷನ್ ಪ್ರಶ್ನಿಸಿ ರಿಟ್ ಅರ್ಜಿ
ಬೆಂಗಳೂರು, ಫೆ. 6- ತಮ್ಮನ್ನು ಸಸ್ಪೆಂಡ್ ಮಾಡಿ ರಾಜ್ಯ ಸರಕಾರ ಹೊರಡಿಸಿರುವ ಆಜ್ಞೆ ಕ್ರಮಬದ್ಧತೆ ಪ್ರಶ್ನಿಸಿ ನೀರಾವರಿ ಛೀಫ್ ಎಂಜಿನಿಯರ್ ಶ್ರೀ ಎಂ.ಎಚ್. ಮಂಚಿಗಯ್ಯ ಸಲ್ಲಿಸಿದ ರಿಟ್ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಶ್ರೀ ಸೋಮನಾಥ್ ಅಯ್ಯರ್ ಹಾಗೂ ಶ್ರೀ ನಾರಾಯಣಪೈ ಅವರು ಸ್ವೀಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.