ADVERTISEMENT

ಉತ್ತೀರ್ಣರಲ್ಲಿ ಪ್ರಮುಖರ ಬಂಧುಗಳೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 17:15 IST
Last Updated 4 ಸೆಪ್ಟೆಂಬರ್ 2019, 17:15 IST

ಉತ್ತೀರ್ಣರಲ್ಲಿ ಪ್ರಮುಖರ ಬಂಧುಗಳೇ ಹೆಚ್ಚು

ಬೆಂಗಳೂರು, ಸೆ. 4– ರಾಜ್ಯ ಲೋಕಸೇವಾ ಆಯೋಗದ ‘ಎ’ ಮತ್ತು ‘ಬಿ’ ಗುಂಪಿನ ಗೆಜೆಟೆಡ್ ಪ್ರೊಬೇಷನರ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಶೇಕಡ 50ರಷ್ಟು ಮಂದಿ ರಾಜ್ಯದ ಮಂತ್ರಿ, ಶಾಸಕರು, ಉನ್ನತಾಧಿಕಾರಿಗಳು ಹಾಗೂ ಆಯೋಗದ ಪ್ರಮುಖರ ಮಕ್ಕಳು, ಅಳಿಯ ಮತ್ತಿತರ ಬಂಧುಗಳು ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

‘ಉತ್ತರ ಪತ್ರಿಕೆಗಳನ್ನು ಮನೆಗೇ ಕೊಂಡೊಯ್ದು ಹೆಚ್ಚುವರಿ ಹಾಳೆಗಳನ್ನು ಸೇರಿಸುವ ಭಾರೀ ಅವ್ಯವಹಾರ ನಡೆದಿದೆ’ ಎಂದು ಶಾಸಕ ಬಿ.ಎಸ್. ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ADVERTISEMENT

ಗರ್ಭಪಾತ ಹಕ್ಕಿಗೆ ಭಾರತದ ಬೆಂಬಲ

ನವದೆಹಲಿ, ಸೆ. 4 (ಪಿಟಿಐ)– ನಾಳೆ ಕೈರೋದಲ್ಲಿ ಪ್ರಾರಂಭವಾಗಲಿರುವ ‘ಜನಸಂಖ್ಯೆ ಹತೋಟಿ ಹಾಗೂ ಅಭಿವೃದ್ಧಿ’ಗೆ ಸಂಬಂಧಿಸಿದ ವಿಶ್ವ ಸಮಾವೇಶದಲ್ಲಿ, ಗರ್ಭಪಾತದ ಹಕ್ಕನ್ನು ವಿರೋಧಿಸುವವರ ಜತೆ ಭಾರತ ಘರ್ಷಣೆಗೆ ಇಳಿಯುವುದು ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.