ಗಾತ್ರ ಕುಗ್ಗಿಸಿ ಸಂಪುಟ ಪುನರ್ರಚನೆಗೆ ಪಟೇಲ್ ಸಿದ್ಧ
ಬೆಂಗಳೂರು, ಡಿ. 5– ರಾಜ್ಯದ, ಪಕ್ಷದ ಹಾಗೂ ಸರ್ಕಾರದ ಹಿತದೃಷ್ಟಿಯಿಂದ ಮಂತ್ರಿ ಮಂಡಲದ ಗಾತ್ರವನ್ನು ಕುಗ್ಗಿಸಿ ಸಂಪುಟ ಪುನರ್ರಚನೆಗೂ ತಾವು ಸಿದ್ಧರಿರುವುದಾಗಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಅವರು ಪಕ್ಷದ ಭಿನ್ನ ಮತೀಯ ಶಾಸಕರೊಂದಿಗೆ ಇಂದು ಸುಮಾರು ಎರಡೂ ಮುಕ್ಕಾಲು ಗಂಟೆ ಮಾತುಕತೆ ನಡೆಸಿ, ಮಂತ್ರಿಮಂಡಲ ಪುನರ್ರಚನೆ ತಕ್ಷಣದಲ್ಲಿ ಇಲ್ಲ, ಹಿರಿಯ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ‘ನಮ್ಮಲ್ಲಿ ಭಿನ್ನಮತ ಇಲ್ಲ. ಇದು ನಮ್ಮ ಮನೆ ವಿಚಾರ. ನನ್ನ ಈ ಆಲೋಚನೆಗೆ ಅವರೂ (ಭಿನ್ನಮತೀಯರು) ಒಪ್ಪಿದ್ದಾರೆ. ಇದೇನಿದ್ದರೂ ರಾಜ್ಯದಲ್ಲಿ ಆಡಳಿತವನ್ನು ಚುರುಕುಗೊಳಿಸಿ, ಜನತೆಯ ಹಿತ ಕಾಪಾಡುವುದೇ ಆಗಿದೆ’ ಎಂದು
ಭಿನ್ನಮತೀಯರೊಂದಿಗೆ ಚರ್ಚಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.