ADVERTISEMENT

25 ವರ್ಷಗಳ ಹಿಂದೆ | ಭಾನುವಾರ, 2–7–1995

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 19:30 IST
Last Updated 1 ಜುಲೈ 2020, 19:30 IST

ಇನ್ನು ಚಿಣ್ಣರಿಗೆ ಕಾಯುವ ಕೆಲಸ ಇಲ್ಲ
ಬೆಂಗಳೂರು, ಜುಲೈ 1–
ಬಿಸಿಲು, ಮಳೆ ಲೆಕ್ಕಿಸದೆ ಮಂತ್ರಿ ಮಹೋದಯರು ಹಾಗೂ ಗಣ್ಯ ವ್ಯಕ್ತಿಗಳ ಸ್ವಾಗತಕ್ಕೆ ಶಾಲಾ ಮಕ್ಕಳು ಕಾಯುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಈ ವ್ಯವಸ್ಥೆ ಯನ್ನು ಮುಂದುವರಿಸಿಕೊಂಡು ಹೋಗುವ ಶಾಲೆಗಳ ವಿರುದ್ಧ ಕಠಿಣ ಕ್ರಮ ತಪ್ಪಿದ್ದಲ್ಲ. ಈ ಭರವಸೆಯನ್ನು ಕೊಟ್ಟವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಚ್‌.ಜಿ.ಗೋವಿಂದೇಗೌಡ.

ಸಚಿವರೂ ಸೇರಿದಂತೆ ಗಣ್ಯ ವ್ಯಕ್ತಿಗಳನ್ನು ಸ್ವಾಗತಿಸುವ ಸಲುವಾಗಿ ಶಾಲಾ ಮಕ್ಕಳು ಕೊನೆ ಮೊದಲು ಇಲ್ಲದಂತೆ ಕಾಯುವುದು ತಪ್ಪಬೇಕು. ಈ ಅಭ್ಯಾಸ ನಿಲ್ಲಿಸಲು ಎಲ್ಲ ಶಾಲೆಗಳಿಗೆ ಸೂಚಿಸಲಾಗಿದೆ. ಈ ಸೂಚನೆಯನ್ನು ಮೀರುವ ಶಾಲೆಯವರ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಗುಂಡೇಟಿಗೆ ಡಕಾಯಿತ ಬಲಿ
ನೆಲಮಂಗಲ, ಜುಲೈ 1–
ನಗ– ನಾಣ್ಯ ದೋಚಲು ಇಲ್ಲಿನ ಎರಡು ಮನೆಗಳಿಗೆ ನುಗ್ಗಿದ ಡಕಾಯಿತರ ತಂಡದ ಜತೆ ಏಕಾಂಗಿಯಾಗಿ ಹೋರಾಡಿದ ಯುವಕನೊಬ್ಬ ಹಾರಿಸಿದ ಗುಂಡಿಗೆ ಒಬ್ಬ ಡಕಾಯಿತ ಬಲಿಯಾಗಿದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.