ಹುಬ್ಬಳ್ಳಿ: ಬಸ್ನಲ್ಲಿ ಬಾಂಬ್ ಸ್ಫೋಟ
ಹುಬ್ಬಳ್ಳಿ, ಜುಲೈ 10– ಧಾರವಾಡದಿಂದ ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದರಲ್ಲಿ ಇಂದು ಮಧ್ಯಾಹ್ನ ಭಾರಿ ಬಾಂಬ್ ಸ್ಫೋಟಗೊಂಡಿತು. ಆಗತಾನೆ ಬಂದಿದ್ದ ಬಸ್ನಿಂದ 56 ಮಂದಿ ಪ್ರಯಾಣಿಕರು ಮತ್ತು ಚಾಲಕ ಕೆಳಗಿಳಿದ ಮೇಲೆ ಈ ಸ್ಫೋಟ ಸಂಭವಿಸಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ.
ಹುಬ್ಬಳ್ಳಿಯಲ್ಲಿ ಪ್ರಥಮ ಬಾರಿಗೆ ಜನನಿಬಿಡ ಸ್ಥಳದಲ್ಲಿ ಮಧ್ಯಾಹ್ನ 12.45ರಿಂದ 12.50ರ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಸ್ಫೋಟದ ಕಾರಣ ಇನ್ನೂ ತಿಳಿದುಬಂದಿಲ್ಲ.
ಬೆಂಗಳೂರಿನಲ್ಲಿ ‘ತಂದೂರ್’ ಶರ್ಮಾ ಬಂಧನ
ಬೆಂಗಳೂರು, ಜುಲೈ 10– ದೆಹಲಿಯ ನೈನಾ ಸಾಹ್ನಿಯನ್ನು ಕೊಲೆ ಮಾಡಿ ಹೋಟೆಲೊಂದರ ‘ತಂದೂರ್’ನಲ್ಲಿ ಸುಟ್ಟ ಪ್ರಕರಣದ ಪ್ರಮುಖ ಆರೋಪಿ ಸುಶೀಲ್ ಶರ್ಮಾನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸರು ಇಂದು ಸಂಜೆ ಹೊಸಕೋಟೆಯಲ್ಲಿ ಬಂಧಿಸಿದ್ದಾರೆ.
ತಿರುಪತಿಯಿಂದ ತಮಿಳುನಾಡು ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಸುಶೀಲ್ ಶರ್ಮಾನನ್ನು ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಹೊಸಕೋಟೆಯಲ್ಲಿ ಬಂಧಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎಸ್.ಕೆ.ವೇಣುಗೋಪಾಲ್ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.