ADVERTISEMENT

ಭಾನುವಾರ, 30–1–1994

ವಾರ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:15 IST
Last Updated 29 ಜನವರಿ 2019, 20:15 IST

ಕರ್ನಾಟಕದ ‘ಮುಲಾಯಂ’ಗೆ ಕಾನ್ಶೀರಾಂ ಶೋಧ

ಬೆಂಗಳೂರು, ಜ. 29– ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಂತಹ ನಾಯಕರೊಬ್ಬರಿಗೆ ಬಹುಜನ ಸಮಾಜ ಪಕ್ಷದ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯ ಕಾನ್ಶೀರಾಂ ಶೋಧ ಆರಂಭಿಸಿದ್ದಾರೆ.

ಇಂದು ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ವಿಷಯ ತಿಳಿಸಿದರು. ‘ಆಂಧ್ರ ಪ್ರದೇಶದಲ್ಲಿ ಸರ್ಕಾರ ರಚಿಸಲು ನಮ್ಮ ಪಕ್ಷಕ್ಕೆ ಮುಲಾಯಂ ಅಂಥವರು ಬೇಕಿಲ್ಲ. ಆದರೆ ಕರ್ನಾಟಕದಲ್ಲಿ ಇಂಥವರೊಬ್ಬರ ಅಗತ್ಯವಿದೆ. ಅವರಿಗಾಗಿ ಇಲ್ಲಿ ಹುಡುಕಾಟ ಆರಂಭಿಸಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

ಕಾಶ್ಮೀರ: ಬಾಹ್ಯ ಒತ್ತಡಕ್ಕೆ ಅವಕಾಶ ನೀಡೆವು– ಚವಾಣ್

ಜಮ್ಮು, ಜ. 29 (ಯುಎನ್‌ಐ)– ಜಮ್ಮು– ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲು ಪಾಕಿಸ್ತಾನ ನಡೆಸಿರುವ ಸಂಚಿಗೆ ಯಾವುದೇ ಹೊರಗಿನ ದೇಶ ಬೆಂಬಲ ನೀಡಲು ನಾವು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಎಸ್.ಬಿ. ಚವಾಣ್ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.