ADVERTISEMENT

25 ವರ್ಷಗಳ ಹಿಂದೆ: ಒಂದೇ ದಿನದಲ್ಲಿ 84 ಹೊಸ ಕರುಳುಬೇನೆ ಪ್ರಕರಣಗಳು ದಾಖಲು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 1:26 IST
Last Updated 28 ಏಪ್ರಿಲ್ 2025, 1:26 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಒಂದೇ ದಿನದಲ್ಲಿ 84 ಹೊಸ ಕರಳು ಬೇನೆ ಪ್ರಕರಣಗಳು ದಾಖಲು 

ಧಾರವಾಡ. ಏ. 27– ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳು ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಕರಳು ಬೇನೆ ಉಲ್ಬಣವಾಗುವ ಲಕ್ಷಣಗಳು ಕಾಣಿಸಿವೆ. ಕಳೆದ 24 ತಾಸುಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 84 ಹೊಸ ಕರಳು ಬೇನೆ ಪೀಡಿತರನ್ನು ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಆಡಳಿತ ನೀಡಿರುವ ಪ್ರಕಟಣೆ ತಿಳಿಸಿದೆ. 

ಅಧ್ಯಕ್ಷೆಯಾಗಿ ಶಾಂತಾದೇವಿ ಮಾಳವಾಡ ಆಯ್ಕೆ 

ಬೆಂಗಳೂರು. ಏ. 27 – ಹಿರಿಯ ಲೇಖಕಿ ಶಾಂತಾದೇವಿ ಮಾಳವಾಡ ಅವರನ್ನು ಬಾಗಲಕೋಟೆಯಲ್ಲಿ ನಡೆಯಲಿರುವ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇಂದು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. 

ಇದರೊಂದಿಗೆ ಸಮ್ಮೇಳನಾಧ್ಯಕ್ಷತೆ ಗೌರವಕ್ಕೆ ಎರಡನೇ ಬಾರಿ ಲೇಖಕಿಯೊಬ್ಬರು ಪಾತ್ರರಾದಂತಾಗಿದೆ. ಈ ಮೊದಲು 1974ರಲ್ಲಿ –– ನಡೆದಿದ್ದ 48ನೇ ಸಾಹಿತ್ಯ ಸಮ್ಮೇಳನಕ್ಕೆ ಲೇಖಕಿ ––– ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿತ್ತು. 

ADVERTISEMENT

ಬಾಗಲಕೋಟೆ ಸಮ್ಮೇಳನಕ್ಕೆ ಲೇಖಕಿಯನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಸಾಹಿತ್ಯ ವಲಯದ ಒತ್ತಾಸೆ ಶಾಂತಾದೇವಿ ಅವರ ಆಯ್ಕೆಯೊಂದಿಗೆ ಈಡೇರಿದಂತಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.