ವಾಯುಪಡೆ ಹೆಲಿಕಾಪ್ಟರ್ನಲ್ಲಿ ನಂದ್ಯಾಲ್ಗೆ ಹಣ: ಆರೋಪ
ನವದೆಹಲಿ, ಏ. 14 (ಪಿಟಿಐ)– ‘ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಕ್ಷೇತ್ರವಾದ ನಂದ್ಯಾಲ್ಗೆ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ನಲ್ಲಿ 25 ಪೆಟ್ಟಿಗೆಗಳಲ್ಲಿ ಅಪಾರ ಪ್ರಮಾಣದ ಹಣವನ್ನು ಒಯ್ಯಲಾಗಿದೆ’ ಎಂಬ ಆರೋಪದ ಬಗ್ಗೆ ವರದಿ ನೀಡಲು ಚುನಾವಣಾ ಆಯೋಗವು ಇಂದು ಆಂಧ್ರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿಗೆ ಆದೇಶ ನೀಡಿದೆ.
ದಳಕ್ಕೆ ಅಂಬರೀಷ್; ಭವ್ಯ ಸ್ವಾಗತ
ಬೆಂಗಳೂರು, ಏ. 14– ಸುಮಾರು ಒಂದೂವರೆ ಗಂಟೆಗಳ ಅವಧಿಯಲ್ಲಿ ಕಿವಿಗಡಚಿಕ್ಕುವ ಪಟಾಕಿ ಸದ್ದಿನ ಮಧ್ಯೆ ರಾಶಿ–ರಾಶಿ ಗುಲಾಬಿ ಮಾಲೆಗಳ ನಡುವೆ ಚಿತ್ರನಟ ಅಂಬರೀಷ್ ಜನತಾದಳದಲ್ಲಿ ವಿಧ್ಯುಕ್ತವಾಗಿ ಸದಸ್ಯತ್ವ ಪಡೆದು ತಮ್ಮ ಹೊಸ ರಾಜಕೀಯ ಅಧ್ಯಾಯವನ್ನು ಇಂದಿಲ್ಲಿ ಪ್ರಾರಂಭಿಸಿದರು.
ಚಿತ್ರರಂಗದವರ ಪೈಕಿ ತಮ್ಮದು ದಳದಲ್ಲಿ ‘ಒಂಟಿ ದನಿ’ ಅಲ್ಲ ಎನ್ನುವುದನ್ನು ತೋರುವ ಉತ್ಸಾಹದಲ್ಲಿದ್ದ ಅವರೊಂದಿಗೆ ಚಿತ್ರನಟಿ ಜಯಮಾಲ ಮತ್ತು ಟಿ.ವಿ ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟ ರವಿಕಿರಣ್ ಜತೆಗೂಡಿದ್ದರು. ಅವರೂ ಪಕ್ಷದ ಸದಸ್ಯತ್ವವನ್ನು ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.