ADVERTISEMENT

25 ವರ್ಷಗಳ ಹಿಂದೆ | ಭಾಗವತ್‌ ಆರೋಪ: ಲೋಕಸಭೆ ಚರ್ಚೆಗೆ ಉಭಯ ಪಕ್ಷಗಳ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2024, 23:49 IST
Last Updated 11 ಮಾರ್ಚ್ 2024, 23:49 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ನೌಕಾಪಡೆಯ ಉಚ್ಚಾಟಿತ ಮುಖ್ಯಸ್ಥ ಅಡ್ಮಿರಲ್‌ ವಿಷ್ಣು ಭಾಗವತ್‌ ಅವರು ಮಾಡಿರುವ ಭ್ರಷ್ಟಾಚಾರದ ಆಪಾದನೆಗಳನ್ನು ಮತದಾನವಿಲ್ಲದ ಗುತ್ತುವಳಿ ಮೂಲಕ ಲೋಕಸಭೆಯಲ್ಲಿ ಚರ್ಚಿಸಲು ಸರ್ಕಾರ ಹಾಗೂ ವಿರೋಧ ಪಕ್ಷಗಳು ಇಂದು ಸಮ್ಮತಿಸಿವೆ.

ಆದರೆ ಅವರನ್ನು ವಜಾ ಮಾಡಿದ್ದ ಬಗ್ಗೆ ಸದಸದಲ್ಲಿ ಚರ್ಚೆ ಮಾಡಬಹುದೇ ಎಂಬುದನ್ನು ತೀರ್ಮಾನಿಸಲು ಹತ್ತು ಮಂದಿಯ ಸಂಸದೀಯ ಸಮಿತಿಯನ್ನು ನೇಮಿಸಲು ತೀರ್ಮಾನಿಸಲಾಗಿದೆ.

ಯುಟಿಐ ಷೇರುಗಳ ಮರುಖರೀದಿ ಹಾಗೂ ಕಬ್ಬಿಣದ ಬೆಲೆ ನಿಗದಿ ಮಾಡುವಾಗ ಸರ್ಕಾರ ಕೆಲವು ಉದ್ಯಮ ಸಂಸ್ಥೆಗಳಿಗೆ ಪಕ್ಷಾಪಾತ ಮಾಡಿದೆ ಎಂಬ ಹಣಕಾಸು ಸಚಿವ ಯಶವಂತ ಸಿನ್ಹಾ ಅವರ ಮಾಜಿ ಸಲಹೆಗಾರ ಮೋಹನ್‌ ಗುರುಸ್ವಾಮಿ ಅವರು ಮಾಡಿರುವ ಆಪಾದನೆಗಳನ್ನು ಸದನದಲ್ಲಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

ವೀರಪ್ಪನ್‌ಗಾಗಿ 18 ಕೋಟಿ ವೆಚ್ಚ

ಬೆಂಗಳೂರು, ಕುಖ್ಯಾತ ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ಇದುವರೆಗೆ ಸುಮಾರು ರೂ. 18 ಕೋಟಿ ವೆಚ್ಚವಾಗಿದೆ ಎಂದು ಗೃಹ ಸಚಿವ ಪಿ.ಜಿ.ಆರ್‌. ಸಿಂಧ್ಯ ಅವರು ಇಂದು ವಿಧಾನ ಪರಿಷತ್ತಿಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.