ಚೆನ್ನೈ, ಆಗಸ್ಟ್ 9 (ಪಿಟಿಐ)– ಇಡೀ ಕರ್ನಾಟಕವೇ ತುದಿಗಾಲ ಮೇಲೆ ಡಾ.ರಾಜ್ ಬಿಡುಗಡೆಗೆ ಕಾಯುತ್ತಿದ್ದರೂ ಈ ಬಗ್ಗೆ ಯಾವ ಕಾತುರವನ್ನೂ ತೋರಿಸದಿರುವ ವೀರಪ್ಪನ್ ಹೊಸ ಬೇಡಿಕೆಗಳ ಇನ್ನೊಂದು ಕ್ಯಾಸೆಟ್ ಕಳುಹಿಸಿದ್ದಾನೆ. ಈ ಕ್ಯಾಸೆಟ್ ಬುಧವಾರ ಮಧ್ಯರಾತ್ರಿ ಇಲ್ಲವೇ ಗುರುವಾರ ಬೆಳಗಿನ ಜಾವ ಚೆನ್ನೈ ತಲುಪುವ ನಿರೀಕ್ಷೆ ಇದೆ. ಈ ಮೊದಲು ತಾನು ಕಳುಹಿಸಿದ್ದ ಬೇಡಿಕೆಗಳು ಅದಕ್ಕೆ ಕರ್ನಾಟಕ, ತಮಿಳ್ನಾಡು ಸರ್ಕಾರಗಳು ನೀಡಿದ ಒಪ್ಪಿಗೆ ಯಾವುದರ ಬಗೆಗೂ ವೀರಪ್ಪನ್ ಪ್ರತಿಕ್ರಿಯೆ ಸೂಚಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.