ಇಸ್ರೇಲ್ ಪ್ರಧಾನಿ ರಬಿನ್ ಹತ್ಯೆ
ಟೆಲ್ ಅವೀವ್, ನ.5 (ಎಪಿ)– ಇಸ್ರೇಲ್ನ ಪ್ರಧಾನಿ ಯಿಜ್ದೆಕ್// ರಬಿನ್ ಅವರು ಶನಿವಾರ ರಾತ್ರಿ ಯೆಹೂದಿ ಹಂತಕನೊಬ್ಬನ ಗುಂಡಿಗೆ ಬಲಿಯಾದರು. ಇಸ್ರೇಲ್ ಶಾಂತಿ ಸಭೆಯಲ್ಲಿ ಭಾಷಣ ಮುಗಿಸಿ ಕಾರ್ ಹತ್ತಲು ಬಂದಾಗ ಮೂರು ಗುಂಡುಗಳು ಅವರತ್ತ ಹಾರಿದವು. ನಂತರ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ರಬಿನ್ ಕೊನೆಯುಸಿರೆಳೆದರು.
ಡೀಸೆಲ್ ಜನರೇಟರ್ ಬಳಸುವ ರೈತರಿಗೆ ರಿಯಾಯ್ತಿ
ಬೆಂಗಳೂರು, ನ. 5– ಕೃಷಿಗೆ ಡೀಸೆಲ್ ಜನರೇಟರ್ ಬಳಸುವ ರೈತರಿಗೆ ಕೆಲವು ರಿಯಾಯ್ತಿಗಳನ್ನು ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಪ್ರಕಟಿಸಿದರು.
ರಾಜ್ಯ ತೀವ್ರ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದೆ. ಸಮಸ್ಯೆಯಿಂದ ಹೇಗೆ ಹೊರಬರುವುದು ಎಂಬ ಚಿಂತೆ ಕಾಡುತ್ತಿದೆ. ಲಿಂಗನಮಕ್ಕಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಶೇ 40ರಷ್ಟು ಮಾತ್ರ ನೀರಿದೆ. ಲಿಂಗನಮಕ್ಕಿಗೆ ನೀರು ತುಂಬಿಸೋಣ ಎಂದರೆ ತಾವು ಅತಿಮಾನುಷರಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ನಲ್ಲಿ ಸಕ್ರಮ: ಬೆಂಗಳೂರು ಹಡ್ಸನ್ ವೃತ್ತ ಹಾಗೂ ಶಿರಶಿ ವೃತ್ತದಲ್ಲಿ 120 ಕೋಟಿ ರೂಪಾಯಿ ವೆಚ್ಚದಲ್ಲಿ ‘ಫ್ಲೈ ಓವರ್’ಗಳನ್ನು ನಿರ್ಮಿಸಲು ಸಚಿವ ಸಂಪುಟ ಮುಂದಿನ ಸಭೆಯಲ್ಲಿ ಮಂಜೂರಾತಿ ನೀಡಲಾಗುವುದು. ಸುಮಾರು ನಲವತ್ತು ಸಾವಿರ ಅನಧಿಕೃತ ನಲ್ಲಿಗಳನ್ನು ಸಕ್ರಮ ಮಾಡಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.