ADVERTISEMENT

25 ವರ್ಷಗಳ ಹಿಂದೆ: ಸೋಮವಾರ 18.11.1996

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2021, 15:23 IST
Last Updated 17 ನವೆಂಬರ್ 2021, 15:23 IST
   

ಸೌಂದರ್ಯ ಸ್ಪರ್ಧೆಗೆ ಪ್ರತಿಭಟನೆ: ಬಂಧನ

ಬೆಂಗಳೂರು, ನ. 17– ವಿಶ್ವಸುಂದರಿ ಸ್ಪರ್ಧೆಯನ್ನು ಪ್ರತಿಭಟಿಸಿ, ವಿವಿಧ ದೇಶಗಳ ಸುಂದರಿಯರು ತಂಗಿರುವ ಪಂಚತಾರ ಹೊಟೇಲ್ ಕಡೆಗೆ ನುಗ್ಗಲು ಯತ್ನಿಸಿದ ಎಡಪಂಥೀಯ ಸಂಘಟನೆಗಳ ಒಂದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಆನಂತರ ಬಿಡುಗಡೆ ಮಾಡಿದರು.

ನಗರ ರೈಲ್ವೆ ನಿಲ್ದಾಣದಿಂದ ಸುಂದರಿಯರು ತಂಗಿರುವ ‘ವಿಂಡ್ಸರ್ ಮ್ಯಾನರ್’ ಹೋಟೆಲ್ ಕಡೆಗೆ ಮೆರವಣಿಗೆ ಹೊರಟಿದ್ದ ಸುಮಾರು ಐದು ಸಾವಿರ ಮಂದಿ ಎಡ ಪಂಥೀಯ ಸಂಘಟನೆಗಳ ಕಾರ್ಯಕರ್ತರನ್ನು ಆನಂದ ರಾವ್ ವೃತ್ತದ ಬಳಿ ಪೊಲೀಸರು ತಡೆದರು.

ADVERTISEMENT

ರಾವ್– ಕೇಸರಿ ಮಧ್ಯೆ ಬಿಕ್ಕಟ್ಟು ಉಲ್ಬಣ

ನವದೆಹಲಿ, ನ. 17 (ಯುಎನ್‌ಐ)– ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಸರ್ಕಾರಕ್ಕೆ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರು ವುದಕ್ಕೆ ಕಾಂಗ್ರೆಸ್ ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ರಾವ್ ಅವರ ಹೇಳಿಕೆಯಿದ ಪಕ್ಷದ ಅಧ್ಯಕ್ಷ ಸೀತಾರಾಂ ಕೇಸರಿ ಹಾಗೂ ಸಂಸ ದೀಯ ಪಕ್ಷದ ಮುಖಂಡ ರಾವ್ ಅವರ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಿದೆ ಎಂಬುದನ್ನು ಕಾಂಗ್ರೆಸ್‌ನ ಉಳಿದ ನಾಯಕರು ಒಪ್ಪಿಕೊಂಡಿ ದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.