ಬೀದರ್, ನ. 18– ಬೀದರ್ ಜಿಲ್ಲಾ ಉಸ್ತುವಾರಿ ಮತ್ತು ಅರಣ್ಯ ಖಾತೆ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ಮಧ್ಯಾಹ್ನ 1.40 ಗಂಟೆಗೆ ಹಾಡಹಗಲೇ ಕೊಲೆ ಮಾಡಲು ನಡೆಸಿದ ಯತ್ನ ಪೊಲೀಸರ ಸಕಾಲಿಕ ಮಧ್ಯ ಪ್ರವೇಶದಿಂದ ವಿಫಲವಾಗಿದೆ.
ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಾಣಿಕ ಪಾಟೀಲ್ (35) ಎಂಬ ಯುವಕ ಒಳನುಗ್ಗಿ ಸಚಿವರ ಕುತ್ತಿಗೆಗೆ ಬ್ಲೇಡ್ ಹಾಕಲು ಯತ್ನಿಸಿದಾಗ ಅವರ ಶರ್ಟ್ ಹರಿಯಿತು. ಅಷ್ಟರಲ್ಲಿ ಸಭೆಯಲ್ಲಿ ಹಾಜರಿದ್ದ ಡಿವೈಎಸ್ಪಿ ಸಿದ್ರಾಮಪ್ಪಾ ಅವರು ಆರೋಪಿಯನ್ನು ಹಿಡಿದುಕೊಂಡರು. ಆತ ಅವರನ್ನು ಜೋರಾಗಿ ತಳ್ಳಿದ. ತಕ್ಷಣ ಎಲ್ಲಾ ಪೊಲೀಸ್ ಸಿಬ್ಬಂದಿ ಮುಗಿಬಿದ್ದು ಆರೋಪಿಯನ್ನು ಹಿಡಿದರು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್ ಅವರು ಘಟನೆಯ ವಿವರಗಳನ್ನು ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.