ರಾಜ್ಯಹಿತ ಅಲಕ್ಷಿಸಿ ‘ಏಕಪಕ್ಷೀಯ ಹಾಗೂ ಸರ್ವಾಧಿಕಾರಿ’ ವರ್ತನೆ
ನವದೆಹಲಿ, ಜೂನ್ 2– ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದ ಮೇಲೆ ರಾಜ್ಯಪಾಲ ಶ್ರೀ ಧರ್ಮವೀರ ಅವರು ರಾಜ್ಯದ ಜನತೆಯ ಹಿತಗಳ ವಿರುದ್ಧ ‘ಏಕಪಕ್ಷೀಯವಾಗಿ ಹಾಗೂ ಸರ್ವಾಧಿಕಾರಿ ಯಂತೆ’ ಕಾರ್ಯ ನಿರ್ವಹಿಸುತ್ತಿದ್ದಾರೆಂದು ದೂರುವ ಮನವಿ ಪತ್ರವೊಂದನ್ನು ಮೈಸೂರಿನ ಸಂಸತ್ ಸದಸ್ಯರು ಇಂದು ಪ್ರಧಾನ ಮಂತ್ರಿಗೆ ಸಲ್ಲಿಸಿದರು.
ವಿವಿಧ ಸಮಿತಿ ಮತ್ತು ಸಂಸ್ಥೆಗಳಿಗೆ ನೇಮಕ ಮಾಡುವಾಗಲೂ ರಾಜ್ಯಪಾಲರು ಪಕ್ಷೀಯ ಆಧಾರದ ಮೇಲೆ ವರ್ತಿಸುತ್ತಿದ್ದಾರೆಂದೂ ಮನವಿಯಲ್ಲಿ ಆಪಾದಿಸಲಾಗಿದೆ.
ಬಿಹಾರ: ತ್ರಿಸದಸ್ಯ ಸಂಪುಟ ಪ್ರಮಾಣ ಸ್ವೀಕಾರ ‘ಸ್ವಚ್ಛ’ ಆಳ್ವಿಕೆ ಭರವಸೆ
ಪಟ್ನಾ, ಜೂನ್ 2– ಶ್ರೀ ಭೋಲಾ ಪಾಸ್ವಾನ್ ಶಾಸ್ತ್ರಿ ಅವರ ನಾಯಕತ್ವದಲ್ಲಿ ಪ್ರಗತಿಶೀಲ ವಿಧಾಯಕ ದಳದ ಮೂರು ಜನ ಸದಸ್ಯರ ಸಂಪುಟವೊಂದು ಇಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿ ರಾಜಭವನದಲ್ಲಿ ರಾಜ್ಯಪಾಲ ಶ್ರೀ ದೇವಕಾಂತ ಬರೂವಾ ಅವರ ಸಮ್ಮುಖ ದಲ್ಲಿ ಸರಳ ಸಮಾರಂಭವೊಂದರಲ್ಲಿ ಪ್ರಮಾಣವಚನ ಸ್ವೀಕರಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.