ADVERTISEMENT

50 ವರ್ಷಗಳ ಹಿಂದೆ: ಭಾನುವಾರ, ಸೆಪ್ಟೆಂಬರ್ 26, 1971

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 18:56 IST
Last Updated 25 ಸೆಪ್ಟೆಂಬರ್ 2021, 18:56 IST
   

ನರಸಿಂಹ ರಾವ್ ಆಂಧ್ರದ ಹೊಸ ಮುಖ್ಯಮಂತ್ರಿ

ಹೈದರಾಬಾದ್, ಸೆ. 25– ಶಿಕ್ಷಣ ಸಚಿವ ಪಿ.ವಿ. ನರಸಿಂಹರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾಗಿ ಇಂದು ಚುನಾಯಿತರಾದರು.

ಕಾಂಗ್ರೆಸ್ ಹೈಕಮಾಂಡ್ ಪ್ರತಿನಿಧಿಗಳಾದ ಸಿ. ಸುಬ್ರಹ್ಮಣ್ಯಂ ಮತ್ತು ಉಮಾಶಂಕರ ದೀಕ್ಷಿತ್ ಅವರು ಇಂದು ರಾತ್ರಿ ಇಲ್ಲಿ ಸಮಾವೇಶಗೊಂಡಿದ್ದ ಪಕ್ಷದ ಸಭೆಯಲ್ಲಿ ಕೆ. ಬ್ರಹ್ಮಾನಂದ ರೆಡ್ಡಿ ಅವರ ಉತ್ತರಾಧಿಕಾರಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದರು.

ADVERTISEMENT

ಈ ನಿರ್ಧಾರಕ್ಕೆ ಪಕ್ಷದ ಶಾಸಕರೆಲ್ಲರ ಬೆಂಬಲ ಸಿಕ್ಕಿರುವುದಾಗಿ ತಿಳಿದುಬಂದಿದೆ.

ಪದಚ್ಯುತ ಮುಖ್ಯಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ನರಸಿಂಹರಾವ್ ಅವರ ಹೆಸರನ್ನು ಸೂಚಿಸಿದರು. ಎಪಿಸಿಸಿ ಅಧ್ಯಕ್ಷ ನರಸಾರೆಡ್ಡಿ ಅವರು ಅನುಮೋದಿಸಿದರು.

ಹೊಸ ನಾಯಕನ ಆಯ್ಕೆಗೆ ಮುಂಚೆ ನಾಲ್ಕು ಗಂಟೆ ಕಾಲ ಹೈಕಮಾಂಡ್ ಪ್ರತಿನಿಧಿಗಳು ಸೇರಿದಂತೆ ಹಲವು ನಾಯಕರು ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.