ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 12.10.1971

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 19:30 IST
Last Updated 11 ಅಕ್ಟೋಬರ್ 2021, 19:30 IST
   

ಮದ್ರಾಸ್ ಭೂ ಸುಧಾರಣೆ ಕಾನೂನು ಕ್ರಮಬದ್ಧ: ಸುಪ್ರೀಂ ಕೋರ್ಟ್ ತೀರ್ಪು

ನವದೆಹಲಿ, ಅ. 11– ಒಂದು ಸಂಸಾರ ಹೊಂದಿರಬಹುದಾದ ಜಮೀನಿನ ಪರಮಾ ವಧಿ ಮಿತಿಯನ್ನು 30 ಸ್ಟ್ಯಾಂಡರ್ಡ್ ಎಕರೆ ಗಳಿಗೆ ಒಳಪಡಿಸುವ 1961ರ ಮದ್ರಾಸ್ ಭೂಸುಧಾರಣೆ ಕಾನೂನು ಕ್ರಮಪ್ರಾಪ್ತ
ವೆಂದು ಶ್ರೇಷ್ಠ ನ್ಯಾಯಾಧೀಶ ಶ್ರೀ ಎಸ್.ಎಂ.ಸಕ್ರಿ ಅವರು ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟಿನ ಏಳು ಜನ ನ್ಯಾಯಾಧೀಶರ ವಿಶೇಷ ನ್ಯಾಯಪೀಠವು ಇಂದು ತೀರ್ಪು ನೀಡಿತು.

ಆ ಕಾನೂನು ಕ್ರಮಪ್ರಾಪ್ತವೆಂದು ಮದರಾಸು ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಜಗನ್ನಾಥ್ ಎಂಬುವವರೂ ಮತ್ತಿ ತರ ಕೆಲವರೂ ಸಲ್ಲಿಸಿದ್ದ ಮನವಿಗಳನ್ನು ನ್ಯಾಯಾಲಯ ವಜಾ ಮಾಡಿತು.

ADVERTISEMENT

1964ರಲ್ಲಿ ಈ ಕಾನೂನನ್ನು ಸುಪ್ರೀಂ ಕೋರ್ಟ್, ಅದು ಸಂವಿಧಾನ ನೀಡುವ ಆಸ್ತಿ ಹಕ್ಕನ್ನು ಉಲ್ಲಂಘಿಸುವುದೆಂದು ಹೇಳಿ ರದ್ದು ಮಾಡಿತ್ತು.

ಗಾಂಧಿ ನಿವಾಸವನ್ನೂ ಬಿಡದ ಸಾರಾಯಿ

ಮಧುರೆ, ಅ. 11– ಧೋತ್ರ, ಅಂಗಿ ಹಾಕುವು ದನ್ನು ತ್ಯಜಿಸಿ, ಅಂದಿನ ಭಾರತದ ಬಡತನ ಪ್ರತಿಬಿಂಬಿಸಲು ತುಂಡು ಪಂಚೆಯನ್ನು ಮಾತ್ರವೇ ಇನ್ನು ಮುಂದೆ ಧರಿಸಬೇಕೆಂಬ ಐತಿಹಾಸಿಕ ನಿರ್ಧಾರವನ್ನು 1921ರಲ್ಲಿ ರಾಷ್ಟ್ರಪಿತ ಗಾಂಧೀಜಿ ಅವರು ತೆಗೆದುಕೊಂಡ ಇಲ್ಲಿನ ಕಟ್ಟಡದಲ್ಲಿ ಈಗ ಸಾರಾಯಿ ಅಂಗಡಿ ತೆರೆಯಲಾಗಿದೆ ಎಂಬ ದೂರನ್ನು ತನಿಖೆಗೆ ಒಪ್ಪಿಸಿರುವುದಾಗಿ ಮಧುರೆಯ ಜಿಲ್ಲಾ ಕಲೆಕ್ಟರರು ಇಂದು ತಿಳಿಸಿದರು.

ಗಾಂಧೀಜಿ ಅವರು ನಿರ್ಧಾರ ತೆಗೆದುಕೊಂಡ ಮನೆಯೇ ಅದಾಗಿದ್ದರೆ, ಅಂಗಡಿಯನ್ನು ಬೇರೆಡೆಗೆ ಬದಲಾಯಿಸು
ವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.