ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 27–6–1971

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 19:45 IST
Last Updated 26 ಜೂನ್ 2021, 19:45 IST
   

ರಾಜ್ಯ ಆಡಳಿತ ಕಾಂಗ್ರೆಸ್‌ ಹೊಸ ಸಮಿತಿ: ಸರ್ವ ಸಮ್ಮತ ಹೆಸರುಗಳ ಸೂಚನೆಗೆ ಆದೇಶ

ನವದೆಹಲಿ, ಜೂನ್‌ 26– ರಾಜ್ಯದ ಪ್ರದೇಶ ಕಾಂಗ್ರೆಸ್‌ ಕಾರ್ಯ ನಿರ್ವಾಹಕ ಸಮಿತಿ ಮತ್ತು ಪ್ರದೇಶ ಚುನಾವಣೆ ಸಮಿತಿಗೆ ನೇಮಿಸಲು ಸರ್ವಸಮ್ಮತ ಅಭ್ಯರ್ಥಿಗಳ ಪಟ್ಟಿಯನ್ನು ಸಲ್ಲಿಸುವಂತೆ ಆಡಳಿತ ಕಾಂಗ್ರೆಸ್ ಹೈಕಮಾಂಡ್‌ ಮೈಸೂರಿನ ಆಡಳಿತ ಕಾಂಗ್ರೆಸ್‌ ನಾಯಕರುಗಳಿಗೆ ಸಲಹೆ ಮಾಡಿದೆ.

ಮುಂಬರಲಿರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಪಕ್ಷವನ್ನು ಬಲಗೊಳಿಸುವ ವಿಚಾರ ಚರ್ಚಿಸಲು ಆಡಳಿತ ಕಾಂಗ್ರೆಸ್‌ ಹೈಕಮಾಂಡ್‌ ಮೈಸೂರು ಪ್ರದೇಶ ಆಡಳಿತ ಕಾಂಗ್ರೆಸ್ ಅಡ್‌ಹಾಕ್‌ ಸಮಿತಿ ಸಂಚಾಲಯ ದೇವರಾಜ ಅರಸು ಮತ್ತು ಶಾಸಕ ಪಕ್ಷದ ನಾಯಕ ಎಚ್‌. ಸಿದ್ದವೀರಪ್ಪನವರನ್ನು ದೆಹಲಿಗೆ ಕರೆಸಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.