l ರಾಜ್ಯ ಸರ್ಕಾರದ ನೌಕರರಿಂದ ವೇತನ ನಿರಾಕರಣೆ
ಬೆಂಗಳೂರು, ಸೆಪ್ಟೆಂಬರ್ 29– ಬೆಲೆ ಏರಿಕೆಯಿಂದ ಜೀವನ ದುಸ್ಸಹವಾಗಿರುವುದರಿಂದ ಕೇಂದ್ರ ಸರ್ಕಾರದ ನೌಕರರಿಗೆ ನೀಡಿದಂತೆ ತುಟ್ಟಿಭತ್ಯೆ ಏರಿಸಬೇಕೆಂಬ ತಮ್ಮ ಮನವಿಗೆ ಸರ್ಕಾರ ಲಕ್ಷ್ಯ ನೀಡದಿರುವುದನ್ನು ಪ್ರತಿಭಟಿಸಲು ರಾಜ್ಯ ಸರ್ಕಾರದ ಬಹುತೇಕ ನೌಕರರು ಇಂದು ವೇತನವನ್ನು ನಿರಾಕರಿಸಿದರೆಂದು ವರದಿಯಾಗಿದೆ.
ಅಕ್ಟೋಬರ್ 1 ಮತ್ತು 2ನೇ ತಾರೀಕು ರಜಾ ದಿನಗಳಾದ್ದರಿಂದ ಸೆಪ್ಟೆಂಬರ್ ತಿಂಗಳ ಸಂಬಳವನ್ನು ಸರ್ಕಾರ ಇಂದು ಮತ್ತು ನಾಳೆ ನೀಡುವ ವ್ಯವಸ್ಥೆ ಮಾಡಿತ್ತು. ಮೈಸೂರು ರಾಜ್ಯ ನೌಕರರ ಸಂಘವು ಅಕ್ಟೋಬರ್ ಮೂರನೇ ತಾರೀಕಿನವರೆಗೆ ಸಂಬಳವನ್ನು ನಿರಾಕರಿಸ
ಬೇಕೆಂದು ತನ್ನ ಸದಸ್ಯರಿಗೆ ಕರೆ ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.