ADVERTISEMENT

50 ವರ್ಷಗಳ ಹಿಂದೆ: ಮಾರ್ಚ್ 16, 1973

ಪ್ರಜಾವಾಣಿ ವಿಶೇಷ
Published 15 ಮಾರ್ಚ್ 2023, 21:28 IST
Last Updated 15 ಮಾರ್ಚ್ 2023, 21:28 IST
   

ಅರಸು ಸಂಪುಟದ ಬಗ್ಗೆ ಸಂಸತ್‌ ಸದಸ್ಯರ ಟೀಕೆಗೆ ತೀವ್ರ ಅಸಮಾಧಾನ
ಬೆಂಗಳೂರು, ಮಾರ್ಚ್‌ 15–
ರಾಜ್ಯದ ಕೆಲವು ಸಂಸತ್‌ ಸದಸ್ಯರು ದೆಹಲಿಯಲ್ಲಿ ಸೇರಿ ರಾಜ್ಯ ಮಂತ್ರಿಮಂಡಲವನ್ನು ಬಹಿರಂಗವಾಗಿ ಟೀಕಿಸಿ ವಿರೋಧಿ ಕ್ರಮಗಳಲ್ಲಿ ನಿರತರಾಗಿರುವ ಬಗ್ಗೆ ಮಂತ್ರಿಮಂಡಲ ಹಾಗೂ ವಿಧಾನಮಂಡಲದ ಕಾಂಗ್ರೆಸ್‌ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ದೆಹಲಿಯಲ್ಲಿ ರಾಜ್ಯದ ಕೆಲವು ಸಂಸತ್‌ ಸದಸ್ಯರು ಸೇರಿ ಶ್ರೀ ಅರಸು ಮಂತ್ರಿಮಂಡಲದ ವಿರುದ್ಧ ಪ್ರಧಾನಿಗೆ ಮನವಿ ಅರ್ಪಿಸುವರೆಂದು ಬೆಳಗಿನ ಪತ್ರಿಕೆಗಳಲ್ಲಿ ಬಂದ ಸುದ್ದಿ ಕಾಂಗ್ರೆಸ್ ವಲಯವನ್ನು ಚಕಿತಗೊಳಿಸಿದೆ.

ಕೆಲವು ಸಂಸತ್ ಸದಸ್ಯರ ದೆಹಲಿ ಸಭೆ ಕುರಿತು ಮುಖ್ಯಮಂತ್ರಿ ಶ್ರೀ ಅರಸು ಅವರು ಪ್ರಧಾನಿಗೆ ಈಗಾಗಲೇ ಪತ್ರ ಬರೆದಿದ್ದಾರೆ.

ADVERTISEMENT

ಉಪಖಂಡ ರಾಷ್ಟ್ರಗಳಿಗೆ ಮಾರಕಾಸ್ತ್ರ ಕಳಿಸದಿರಲು ಅಮೆರಿಕ ನಿರ್ಧಾರ
ನವದೆಹಲಿ, ಮಾರ್ಚ್‌ 15–
ಭಾರತ ಉಪಖಂಡದ ಯಾವ ರಾಷ್ಟ್ರಕ್ಕೂ ಮಾರಕಾಸ್ತ್ರಗಳನ್ನು ಇನ್ನು ಮುಂದೆ ಸರಬರಾಜು ಮಾಡಬಾರದೆಂದು ತಮ್ಮ ಸರ್ಕಾರ ‘ಆತ್ಮಸಾಕ್ಷಿಯ ನಿರ್ಧಾರ’ ಕೈಗೊಂಡಿದೆ ಎಂದು ಅಮೆರಿಕದ ಹೊಸ ರಾಯಭಾರಿ ಡೇನಿಯಲ್‌ ಪ್ಯಾಟ್ರಿಕ್‌ ಮೊಯ್ನಿಹಾನ್ ಅವರು ಪ್ರಧಾನಿ ಇಂದಿರಾ ಅವರಿಗೆ ಇಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.