ವಿರೋಧಿ ಸಭೆ ಚದುರಿಸುವ ಚಮತ್ಕಾರ ಯಂತ್ರ
ಇಂದೋರ್, ಫೆ. 16:ಮಧ್ಯಪ್ರದೇಶದ ಗ್ರಾಮಾಂತರ ಪ್ರದೇಶದಲ್ಲಿ ಪ್ರತಿಸ್ಪರ್ಧಿ ಮಾತನಾಡುತ್ತಿರುವ ಚುನಾವಣೆ ಸಭೆ ಯಿಂದ ಜನರ ಗಮನ ಪರಿಣಾಮಕಾರಿಯಾಗಿ ಬೇರೆ ಕಡೆಗೆ ತಿರುಗಿಸಲು ಅತ್ಯುತ್ತಮ ಸಾಧನ ಯಾವುದು?
ಆ ಪ್ರದೇಶದಲ್ಲೇ ಹೆಲಿಕಾಪ್ಟರನ್ನು ಇಳಿಸಿ ದರೆ, ಚುನಾವಣೆ ಸಭೆ ನಿರ್ಜನವಾಗುತ್ತದೆ. ಹಳ್ಳಿಗಾಡಿನ ಮುಗ್ಧ ಜನ ಹೆಲಿಕಾಪ್ಟರನ್ನು ನೋಡಲು ಓಡಿ ಬರುತ್ತಾರೆ.
ಕಳೆದ ಮಹಾ ಚುನಾವಣೆಗಳಲ್ಲಿ ಗ್ವಾಲಿ ಯರ್ನ ರಾಜಮಾತೆ ಈ ತಂತ್ರವನ್ನು ಅನುಸರಿಸಿದವರಲ್ಲಿ ಮೊದಲನೆಯವರು. ಆಡಳಿತ ಕಾಂಗ್ರೆಸ್ಸಿನ ಅಭ್ಯರ್ಥಿಗ್ವಾಲಿಯರ್ನಲ್ಲಿ ಸೋತರು. ತಮ್ಮ ಪ್ರತಿಸ್ಪರ್ಧಿ ಹೆಲಿಕಾಪ್ಟರನ್ನು ಬಳಸಿದ್ದು ತಮ್ಮ ಸೋಲಿಗೆ ಕಾರಣಗಳಲ್ಲೊಂದು ಎಂದು ಅವರು ಒಪ್ಪಿಕೊಂಡಿದ್ದಾರೆ. ಈ ಸಲ ಆಡಳಿತ ಕಾಂಗ್ರೆಸ್ ಪಕ್ಷವೂ ಸವಾಲನ್ನೆದುರಿ ಸಲು ಎರಡು ಹೆಲಿಕಾಪ್ಟರುಗಳನ್ನು ಹೊಂದಿದೆ.
ಪಾಕಿಸ್ತಾನದಲ್ಲಿನ ಭಾರತ ರಾಯಭಾರಿಗೆ ದೆಹಲಿಗೆ ಬರಲು ಕರೆ
ನವದೆಹಲಿ, ಫೆ. 16: ಇಂಡಿಯನ್ ಏರ್ಲೈನ್ಸ್ನ ವಿಮಾನವನ್ನು ಅಪಹರಿಸಿ, ಅದನ್ನು ಸುಟ್ಟನಂತರ ಕಂಡುಬಂದ ಪಾಕಿ ಸ್ತಾನದ ಹಗೆತನದ ಮನೋಭಾವ ಕುರಿತು ತುರ್ತು ಸಮಾಲೋಚನೆಗಳನ್ನು ನಡೆಸಲು ದೆಹಲಿಗೆ ಬರುವಂತೆ, ಪಾಕಿಸ್ತಾನದಲ್ಲಿನ ತನ್ನ ಹೈಕಮಿಷನರರಿಗೆ ಭಾರತ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.