ಬಾಂಗ್ಲಾದೇಶದ ಬಹುಪಾಲು ಪ್ರದೇಶ ಮುಜೀಬುರ್ ಸೇನೆ ವಶ
ಅಗರ್ತಲ, ಮಾರ್ಚ್ 30– ಪೂರ್ವ ಪಾಕಿಸ್ತಾನದ ಬಹುಪಾಲು ಪ್ರದೇಶ ಸ್ವತಂತ್ರ ಬಾಂಗ್ಲಾದೇಶದ ವಿಮೋಚನಾ ಸೇನೆಯ ವಶದಲ್ಲಿದೆ ಎಂದು ಬಾಂಗ್ಲಾದೇಶದ ನಾಯಕರು ಇಂದು ವಿಶ್ವಕ್ಕೆ ಸಾರಿದರು.
ಸತ್ಯಾಂಶವನ್ನು ಕಣ್ಣಾರೆ ಕಂಡು ತಿಳಿ ಯಲು ಪ್ರಪಂಚದ ರಾಷ್ಟ್ರಗಳಿಗೆ ಅವರು ಆಹ್ವಾನವಿತ್ತರು. ಸ್ವತಂತ್ರ ಬಾಂಗ್ಲಾ ಬಾನುಲಿಯ ವಿಶೇಷ ಪ್ರಸಾರದಲ್ಲಿ ಮೇಜರ್ ಜಿಯಾಖಾನರು ಮಾತನಾಡುತ್ತಾ, ಪಶ್ಚಿಮ ಪಾಕಿಸ್ತಾನಿ ಪಡೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲೆಲ್ಲೂ ಸೋಲುಂಡು ಹಿಂದಕ್ಕೆ ಸರಿಯುತ್ತಿವೆ ಎಂದು ತಿಳಿಸಿದರು.
ಮೈಸೂರು ಬಜೆಟ್ಗೆ ಅಸ್ತು–ರಾಷ್ಟ್ರಪತಿ ಆಡಳಿತ ಜಾರಿಗೆ ರಾಜ್ಯಸಭೆ ಮಿಶ್ರ ಪ್ರತಿಕ್ರಿಯೆ
ನವದೆಹಲಿ, ಮಾರ್ಚ್ 30– ಮೈಸೂರು ರಾಜ್ಯದ ತಾತ್ಕಾಲಿಕ ಬಜೆಟ್ ಅನ್ನು ಇಂದು ರಾಜ್ಯಸಭೆ ಒಪ್ಪಿತಾದರೂ ಮೈಸೂರಿನಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತಂದ ವಿಚಾರದಲ್ಲಿ ಸಮ್ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.