ADVERTISEMENT

50 ವರ್ಷಗಳ ಹಿಂದೆ: ಪಶ್ಚಿಮ ಘಟ್ಟಗಳ ಅಭಿವೃದ್ಧಿ ಬಗ್ಗೆ ಸಮಿತಿ ರಚನೆ

ಪ್ರಜಾವಾಣಿ ವಿಶೇಷ
Published 26 ಫೆಬ್ರುವರಿ 2024, 22:30 IST
Last Updated 26 ಫೆಬ್ರುವರಿ 2024, 22:30 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಬೆಂಗಳೂರು, ಫೆ. 26– ಪಶ್ಚಿಮಘಟ್ಟಗಳ ಅಭಿವೃದ್ಧಿ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ಸಮಿತಿಯೊಂದನ್ನು ಯೋಜನಾ ಆಯೋಗ ರಚಿಸಿದೆಯೆಂದು ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಇಂದು ವಿಧಾನಸಭೆಯಲ್ಲಿ ತಿಳಿಸಿದರು.

‘ಅದರಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪ್ರತಿನಿಧಿಗಳು ಸದಸ್ಯ
ರಾಗಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿಗೆ ನಾಳೆಯಿಂದ ಡೀಸೆಲ್ ಎಂಜಿನ್

ADVERTISEMENT

ಹೈದರಾಬಾದ್‌, ಫೆ. 26– ಬೆಂಗಳೂರು ನಗರದಿಂದ ಮೀರಜ್‌ಗೆ ಹೋಗುವ ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿಗೆ ಈ ತಿಂಗಳ 28ರಿಂದ ಡೀಸೆಲ್ ಎಂಜಿನ್ ಅಳವಡಿಸಲಾಗು ವುದು. ದಕ್ಷಿಣ– ಮಧ್ಯ ರೈಲ್ವೆ ವಿಭಾಗದಲ್ಲಿ ಮೀಟರ್ ಗೇಜ್‌ನಲ್ಲಿ ಎಕ್ಸ್‌ಪ್ರೆಸ್ ರೈಲೊಂದಕ್ಕೆ ಡೀಸೆಲ್ ಎಂಜಿನ್ ಅಳವಡಿಸುತ್ತಿರುವುದು ಇದೇ ಪ್ರಪ್ರಥಮ ಎಂದು ರೈಲ್ವೆ ಪತ್ರಿಕಾ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.