ADVERTISEMENT

ಪ್ರಜಾವಾಣಿ 50 ವರ್ಷಗಳ ಹಿಂದೆ: ಬುಧವಾರ 24–3–1971

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 19:31 IST
Last Updated 23 ಮಾರ್ಚ್ 2021, 19:31 IST
   

ಆರ್ಥಿಕ, ಸಾಮಾಜಿಕ ಪರಿವರ್ತನೆಗೆ ಸರ್ಕಾರ ಬದ್ಧ: ಗಿರಿ ಘೋಷಣೆ

ನವದೆಹಲಿ, ಮಾರ್ಚ್ 23– ಆಡಳಿತ ಕಾಂಗ್ರೆಸ್ಸಿನ ಚುನಾವಣೆ ಪ್ರಣಾಳಿಕೆಯಲ್ಲಿ ನಮೂದಿಸಿರುವ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಕುರಿತ ಕಾರ್ಯಕ್ರಮವನ್ನು ಜಾರಿಗೆ ತರಲು ತಮ್ಮ ಹೊಸ ಸರ್ಕಾರ ಬದ್ಧವಾಗಿರುವುದಾಗಿ ರಾಷ್ಟ್ರಪತಿ ಶ್ರೀ ವಿ.ವಿ.ಗಿರಿ ಅವರು ಹರ್ಷೋದ್ಗಾರಗಳ ಮಧ್ಯೆ ಇಂದು ಸಂಸತ್‌ನ ಜಂಟಿ ಅಧಿವೇಶನದಲ್ಲಿ ತಿಳಿಸಿದರು.

ಮೂರು ವಾರಗಳ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡಿದರು.

ADVERTISEMENT

ಬಿ.ಟಿ.ಎಸ್. ವಾಹನಗಳ ಹಠಾತ್ ತನಿಖೆ

ಬೆಂಗಳೂರು, ಮಾರ್ಚ್ 23– ನಗರದ ಪೊಲೀಸರು ಮೋಟಾರ್ ವಾಹನಗಳ ಇನ್‌ಸ್ಪೆಕ್ಟರರ ಸಹಾಯದಿಂದ ಇಂದು ಬೆಳಿಗ್ಗೆ ಬಿ.ಟಿ.ಎಸ್. ಬಸ್ಸುಗಳ ಹಠಾತ್ ತನಿಖೆ ನಡೆಸಿದರು.

ನಾಲ್ಕು ಗಂಟೆಗಳ ಈ ಅನಿರೀಕ್ಷಿತ ತನಿಖೆ ಪರಿಣಾಮವಾಗಿ 50 ಬಿ.ಟಿ.ಎಸ್. ಬಸ್ಸುಗಳ ಪೈಕಿ ಎಂಟು ಬಸ್ಸುಗಳು ಸಂಚರಿಸಲು ಅನರ್ಹವಾಗಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.