ADVERTISEMENT

50 Years Back | 50 ವರ್ಷದ ಹಿಂದೆ ಈ ದಿನ: 28–03–1973 ಬುಧವಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 0:00 IST
Last Updated 28 ಫೆಬ್ರುವರಿ 2023, 0:00 IST
   

ಪಾಕ್ ಯುದ್ಧ ಕೈದಿಗಳ ಏಕಪಕ್ಷೀಯ ಬಿಡುಗಡೆ ಸಲಹೆ ತರ್ಕಶೂನ್ಯ: ಇಂದಿರಾ

ನವದೆಹಲಿ, ಫೆ. 27– ಬಾಂಗ್ಲಾದೇಶದ ಒಪ್ಪಿಗೆ ಇಲ್ಲದೆ ಪಾಕಿಸ್ತಾನಿ ಯುದ್ಧ ಬಂದಿಗಳನ್ನು ಭಾರತ ಬಿಡುಗಡೆ ಮಾಡುವುದಿಲ್ಲ ಎಂದು ಇಂದು ಸ್ಪಷ್ಟಪಡಿಸಿದ ಪ್ರಧಾನಿ ಇಂದಿರಾ ಅವರು, ಬಂದಿಗಳನ್ನು ಭಾರತವೇ ಏಕಪಕ್ಷೀಯವಾಗಿ ವಾಪಸು ಕಳುಹಿಸಬೇಕೆಂಬ ಸಲಹೆಯನ್ನು ‘ತರ್ಕರಹಿತ ಹಾಗೂ ಅವಾಸ್ತವಿಕ’ ಎಂದು ತಳ್ಳಿಹಾಕಿದರು.

ಅಂತರರಾಷ್ಟ್ರೀಯ ವಾಸ್ತವಾಂಶಗಳನ್ನು ಕಡೆಗಣಿಸುವುದು ಸಾಧ್ಯವಿಲ್ಲ; ಬಾಂಗ್ಲಾದೇಶ ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿದೆ; ಅದಕ್ಕೆ ತಕ್ಕ ಮರ್ಯಾದೆ ಸಲ್ಲಲೇಬೇಕು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.