ADVERTISEMENT

50 ವರ್ಷಗಳ ಹಿಂದೆ: ಹಣದುಬ್ಬರ, ಕಪ್ಪುಹಣ ವಿರುದ್ಧ ಸ‍ಮಗ್ರ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2023, 23:30 IST
Last Updated 16 ಸೆಪ್ಟೆಂಬರ್ 2023, 23:30 IST
   

ಹಣದುಬ್ಬರ, ಕಪ್ಪುಹಣ ವಿರುದ್ಧ ಸ‍ಮಗ್ರ ಕ್ರಮ

ನವದೆಹಲಿ, ಸೆ. 16– ಹಣದುಬ್ಬರದ ನಿಗ್ರಹಕ್ಕಾಗಿ ಉಗ್ರ ಕ್ರಮಗಳನ್ನು ತೆಗೆದುಕೊಂಡು, ರಾಷ್ಟ್ರದಲ್ಲಿ ಕಪ್ಪುಹಣದ ಪಿಡುಗನ್ನು ತಡೆಗಟ್ಟಲು ಸಮಗ್ರ ತಂತ್ರ ರೂಪಿಸಬೇಕೆಂದು ಎಐಸಿಸಿ ಇಂದು ಕರೆ ಕೊಟ್ಟಿದೆ.

ಆರ್ಥಿಕ ಪರಿಸ್ಥಿತಿ ಕುರಿತು ಕಾರ್ಯಕಾರಿ ಸಮಿತಿ ಸೂಚಿಸಿದಂತೆ ಅದು ಅಂಗೀಕರಿಸಿದ ನಿರ್ಣಯ, ಹಣಕಾಸು ರಂಗದ ವಿಷಯದಲ್ಲಿ ‘ಸ್ವಲ್ಪ ಸಂಶಯ ಮತ್ತು ಭೀತಿ’ಗಳಿವೆ ಎಂದು ಒಪ್ಪಿಕೊಂಡು ವಿಳಂಬ ಮಾಡದೆ ನಿರ್ದಿಷ್ಟ ಧ್ಯೇಯ ಮತ್ತು ಕಾರ್ಯಕ್ರಮಗಳ ಗುರಿಗಳನ್ನು ನಿರೂಪಿಸುವುದು ಅವಶ್ಯವೆಂದೂ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.