ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, ಡಿಸೆಂಬರ್ 24, 1971

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:30 IST
Last Updated 23 ಡಿಸೆಂಬರ್ 2021, 19:30 IST
   

ಮತ್ತೊಂದು ಭಾರತ– ಪಾಕ್‌ ಸಮರ ಅಸಂಭವ: ರಾಂ
ನವದೆಹಲಿ, ಡಿ. 23
– ಭಾರತ ಪಾಕಿಸ್ತಾನಗಳ ನಡುವೆ ಮತ್ತೊಂದು ಸಮರದ ಸಾಧ್ಯತೆ ತಮಗೆ ಕಾಣಬರುತ್ತಿಲ್ಲವೆಂದು ರಕ್ಷಣಾ ಸಚಿವ ಜಗಜೀವನ ರಾಂ ತಿಳಿಸಿದ್ದಾರೆ.

‘ಪಾಕಿಸ್ತಾನದ ಅಧ್ಯಕ್ಷ ಭುಟ್ಟೋ ಅವರು ಮಾಡಿದ ಪ್ರಥಮ ಪ್ರಸಾರ ಭಾಷಣದಲ್ಲಿ ಸಮರದ ಬೆದರಿಕೆ ಹಾಕಿದರು. ಆದರೆ ಆನಂತರ ಮಾಡಲಾದ ಭಾಷಣಗಳಲ್ಲಿ ಭುಟ್ಟೋ ಅವರೇ ಸಮರದ ಬೆದರಿಕೆಯನ್ನು ಕಡಿಮೆ ಮಾಡಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಕಬ್ಬಿನ ಕನಿಷ್ಠ ಬೆಲೆ ಏರಿಸಲು ಒಪ್ಪಿಗೆ
ನವದೆಹಲಿ, ಡಿ. 23–
ಕಬ್ಬು ಬೆಳೆಗಾರರಿಗೆ ಶಾಸನ ಬದ್ಧ ಕನಿಷ್ಠ ದರಕ್ಕಿಂತ ಹೆಚ್ಚು ನೀಡಲು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುವ ಬಳಕೆದಾರರ ಸಕ್ಕರೆ ಬೆಲೆಯನ್ನು ಕಿಲೋಗೆ ಎರಡು ರೂ.ಗೆ ಇಳಿಸಲು ರಾಷ್ಟ್ರದಲ್ಲಿನ ಸಕ್ಕರೆ ಗಿರಣಿ ಮಾಲೀಕರು ಒಪ್ಪಿಕೊಂಡಿರುವುದಾಗಿ ಸರ್ಕಾರ ಇಂದು ಲೋಕಸಭೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.