ಗೋಪಾಲಗೌಡರಿಗೆ ಆತ್ಮೀಯರ ಅಂತಿಮ ಬೀಳ್ಕೊಡುಗೆ
ಬೆಂಗಳೂರು, ಜೂನ್ 10– ಬರಲು ಸಾಧ್ಯವಾದವರೆಲ್ಲ ಬಂದಿದ್ದರು. ಜೀಪಿನ ಹಿಂಭಾಗದ ವೇದಿಕೆಯ ಮೇಲೆ ಮಲಗಿದ್ದ ಶ್ರೀ ಶಾಂತವೇರಿ ಗೋಪಾಲಗೌಡ ಅವರನ್ನು ಹಿಂಬಾಲಿಸುತ್ತ ಬಿಸಿಲಿನಲ್ಲಿ ನಡೆದರು.
ಮಧ್ಯಾಹ್ನ 1.30ರ ಸಮಯದಲ್ಲಿ ಶ್ರೀ ಗೌಡ ಅವರ ಪಾರ್ಥಿವ ಶರೀರವನ್ನು ವಿದ್ಯುತ್ ಚಿತೆಯ ಗೂಡಿನಲ್ಲಿ ಇಡಲಾಯಿತು. ಇದಕ್ಕೆ ಮುನ್ನ ನೆರೆದಿದ್ದ ಗೆಳೆಯರು ಗದ್ಗದಿತ ಕಂಠದಲ್ಲಿ ‘ಸಮಾಜವಾದಿ ಗಾಂಧಿ ಗೋಪಾಲಗೌಡರು, ರಾಯುವಾಗಲಿ’ ಎಂದು ಜಯಕಾರ ಮಾಡಿದ್ದರು.
ನಿನ್ನೆ ನಿಧನರಾದ ಸೋಷಲಿಸ್ಟ್ ನಾಯಕ ಶ್ರೀ ಗೋಪಾಲಗೌಡ ಅವರ ಅಂತಿಮ ಯಾತ್ರೆ ಬೆಳಿಗ್ಗೆ 11ಕ್ಕೆ ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಯನ್ನು ಬಿಟ್ಟಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.